ಕಳಸ ಲೈವ್ ವರದಿ
ಪ್ರತಿ ತಿಂಗಳೂ ನಿವೃತ್ತಿ ವೇತನ ಸಿಗುತ್ತಿದ್ದ ಹಳೆ ಪಿಂಚಣೆ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು ಎಂದು ಸರ್ಕಾರಿ ನೌಕರರು ಶನಿವಾರ ಪಟ್ಟಣದಲ್ಲಿ ಮನವಿ ಸಲ್ಲಿಸಿದರು.
ಕಳಸ ತಾಲ್ಲೂಕು ಕಚೇರಿ ಮುಂಭಾಗ ನೆರೆದ ಕಾಲೇಜು ಉಪನ್ಯಾಸಕರು, ಶಾಲಾ ಶಿಕ್ಷಕರು, ಮೆಸ್ಕಾಂ ಸಿಬ್ಬಂದಿ ಮತ್ತಿತರ ಉದ್ಯೋಗಿಗಳು ತಹಶೀಲ್ದಾರ್ ನಂದಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದೇ 19ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಳೆ ಪಿಂಚಣೆ ಯೋಜನೆ ಜಾರಿಗೆ ತರುವಂತೆ ಹೋರಾಟ ನಡೆಯುತ್ತದೆ.ಈ ಬಾರಿ ಮಾಡು ಇಲ್ಲವೇ ಮಡಿ ಎಂಬಂತೆ ಗಂಭೀರ ಹೋರಾಟ ನಡೆಯಲಿದೆ.
ನಿವೃತ್ತ ಜೀವನಕ್ಕೆ ಭದ್ರ ಬುನಾದಿ ಇಲ್ಲದಿದ್ದರೆ ವೃದ್ದಾಪ್ಯ ಅತಂತ್ರ ಆಗುತ್ತದೆ.ಆದ್ದರಿಂದ ಎನ್ ಪಿ ಎಸ್ ರದ್ದು ಮಾಡಿ ಎಲ್ಲ ಸರ್ಕಾರಿ ಉದ್ಯೋಗಿಗಳಿಗೂ ಹಳೆ ಪಿಂಚಣಿ ಯೋಜನೆಯನ್ನೇ ಮತ್ತೆ ಜಾರಿಗೆ ತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬೆಂಗಳೂರಿನ ಹೋರಾಟಕ್ಕೆ ಕಳಸ ತಾಲ್ಲೂಕಿನಿಂದ 50 ನೌಕರರು ತೆರಳುವ ಬಗ್ಗೆ ತೀರ್ಮಾನ ಮಾಡಲಾಗಿದೆ.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ ಶಿಕ್ಷಕರಾದ ಮಧುಸೂದನ್, ಶೃಂಗೇಶ್, ಸಂದೇಶ್, ರೇವತಿ, ಮೇನಕಾ,ರೇಖಾ ಇತರರು ಇದ್ದರು.