ಕಳಸ ಲೈವ್ ವರದಿ
ಅಪರಾಧಗಳನ್ನು ತಡೆ ಗಟ್ಟಬೇಕಾದರೆ ಮೊದಲು ನಾವು ಜಾಗೃತ ರಾಗಬೇಕಿದ್ದು ಯುವ ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಕುದುರೆಮುಖ ವೃತ್ತ ನಿರೀಕ್ಷಕ. ಸಿ.ಎನ್.ರಮೇಶ್ ಹೇಳಿದರು .
ಅವರು ಶನಿವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವೆ ಯೋಜನೆ ಮತ್ತು ಕಾನೂನು ಅರಿವು ಜಾಗೃತಿ ಘಟಕ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರು ಹೊರಗಡೆ ಹೋಗುವಾಗ ತಮ್ಮ ವಸ್ತು ಒಡವೆ ಬಗ್ಗೆ ಜಾಗ್ರತೆ ಅವಶ್ಯ ವಾಗಿದೆ. ರಸ್ತೆ ಸುರಕ್ಷಾ ನಿಯಮ ಗಳನ್ನು ಪಾಲಿಸಿಕೊಂಡು ಯುವಕರು ಹೆಲ್ಮೆಟ್ ಧರಿಸುವ ಮೂಲಕ ತಮ್ಮ ಅಮೂಲ್ಯ ಜೀವವನ್ನು ರಕ್ಷಿಸಿ ಕೊಳ್ಳಬಹುದು ಎಂದರು.
ಸಂಪನ್ಮೂಲ ವ್ಯಕ್ತಿ ಕಳಸ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಡಾ.ಸಿ ಆರ್ ಮೋಹನ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಸದಾ ಹೆತ್ತವರ ಸಲಹೆ ಗಳನ್ನು ಪಾಲಿಸುವುದರೊಂದಿಗೆ ದೇಶದ ಕಾನೂನನ್ನು ಗೌರವಿಸಬೇಕು. ವಿದ್ಯಾರ್ಥಿ ಗಳು ಮಾದಕ ದ್ರವ್ಯ ಗಳ ಕುರಿತು ಎಚ್ಚರಿಕೆ ಯಿಂದಿದ್ದು ಪರವಾನಗಿ ಮತ್ತಿತರ ಸೂಕ್ತ ದಾಖಲೆಗಳಿಲ್ಲದೆ ವಾಹನ ಗಳನ್ನು ಚಲಾಯಿಸಬಾರದು ಯಾವುದೇ ಒಟಿಪಿ. ಪಾಸ್ ವರ್ಡ್ ಗಳನ್ನು ಹಂಚಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ವಿನಯ್ ಕುಮಾರ್ ಶೆಟ್ಟಿ ಮಾತನಾಡಿ ವಿದ್ಯಾರ್ಜನೆ ಯೊಂದಿಗೆ ಸಾಮಾನ್ಯ ಜ್ಞಾನ ವನ್ನು ಬೆಳೆಸಿ ಕೊಂಡು ಸಮಾಜವನ್ನು ಚಿಕಿತ್ಸಕ ರೂಪ ದಲ್ಲಿ ತಿದ್ದಲು ಹಾಗೂ ಅರೋಗ್ಯ ಪೂರ್ಣ ಸಮಾಜ ಕಟ್ಟಲು ಯುವಕರು ಸನ್ನದ್ಧ ರಾಗಬೇಕು. ಪೆÇಲೀಸ್ ಇಲಾಖೆ ಹಮ್ಮಿ ಕೊಂಡಿರುವ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ದಲ್ಲಿ ವಿದ್ಯರ್ಥಿಗಳು ಕೈ ಜೋಡಿಸಿ ಸಮಾಜ ದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ರಾಷ್ಟ್ರೀಯ ಸೇವಾ ಯೋಜನಾ ಮುಖ್ಯಸ್ಥ ವಿಶು ಕುಮಾರ್, ಅನಂತ್,ಪಿಸಿ. ಅನೂಪ್, ಕೌಶಿಕ್ ಇದ್ದರು.