ಕಳಸ ಲೈವ್ ವರದಿ
ರಸ್ತೆ ಸುರಕ್ಷತೆಯ ಬಗ್ಗೆ ಯುವ ಜನತೆ ಪಾಲಿಸದೆ ಇರುವುದರಿಂದ ಹೆಚ್ಚಿನ ವಾಹನ ಅಪಘಾತ ಗಳಾಗಿ ಸಾವು ಸಂಭವಿಸುತ್ತದೆ ಈ ನಿಟ್ಟಿನಲ್ಲಿ ವಾಹನ ಚಲಾಯಿಸುವವರು ಜಾಗರೂಕರಾಗಬೇಕು ಎಂದು *ಕಳಸ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಡಾ.ಸಿ ಆರ್ ಮೋಹನ್ ಕುಮಾರ್ ಹೇಳಿದರು* .
ಅವರು ಇಂದು ಅಪರಾಧ ತಡೆ ಮಾಸ ಜಾಗೃತಿ ಕಾರ್ಯಕ್ರಮ ದ ಅಂಗವಾಗಿ ಪೊಲೀಸ್ ಠಾಣಾ ಸರಹದ್ದಿನ ಬಾಳೆಹೊಳೆ ಸರ್ಕಲ್ ದಲ್ಲಿ ಮಾತನಾಡಿದರು.
ಕಳ್ಳತನ ದಿನೇ ದಿನೇ ಜಾಸ್ತಿ ಆಗುತ್ತಿದೆ ಅದನ್ನು ತಡೆ ಗಟ್ಟುವ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಬೇಕು. ಸಾರಿಗೆ ನಿಯಮ ಉಲ್ಲಂಘನೆ ಮಾಡುವುದರ ಬಗ್ಗೆ ಉಪಯುಕ್ತ ವಾಗುವಂತಹ ಹಲವಾರು ಮಾರ್ಗದರ್ಶನ ನೀಡಿದರು.
ಇದೆ ಸಂದರ್ಭದಲ್ಲಿ ತೋಟದೊರು ಗ್ರಾಮ ಪಂಚಾಯಿತಿ ಅಭಿರುದ್ದಿ ಅಧಿಕಾರಿ ಶರತ್. ಗ್ರಾಮಸ್ಥರಾದ ಸತೀಶ್, ರಮೇಶ್, ಬಾಳೆಹೊಳೆ ಆಟೋ ರಿಕ್ಷಾ *ಚಾಲಕರು* ಮತ್ತು *ಮಾಲೀಕರು* ಹಾಗೂ ಸಾರ್ವಜನಿಕರು ಭಾಗವಿಸಿದ್ದರು.