ಕಳಸ ಲೈವ್ ವರದಿ
ಡಾ||ರಾಜ್ ಕನ್ನಡ ಸಂಘ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಸೋಮವಾರ ಕಳಸದ ದುರ್ಗಾ ಮಂಟಪದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಗೀತೆ ರಚನೆಕಾರ ಮತ್ತು ಸಾಹಿತಿಗಳಾದ ಬಾಲಕೃಷ್ಣ ಕಾಮತ್ ಕಳಸ ಇವರು ಉದ್ಘಾಟಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಕರವೇ ಅಧ್ಯಕ್ಷ ಪೂರ್ಣೇಶ್,ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು, ಕುದುರೆಮುಖ ವೃತ್ತ ನಿರೀಕ್ಷಕ ರಮೇಶ್ ಕುಮಾರ್, ಕರವೇ ರಾಜ್ಯ ಉಪಾಧ್ಯಕ್ಷ ಶಿವರಾಜೇಗೌಡ, ಜೆಡಿಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಹೆಚ್.ಡಿ.ಜ್ವಾಲನಯ್ಯ,ಕಳಸ ಕಸಾಪ ಅಧ್ಯಕ್ಷ ಸತೀಶ್ಚಂದ್ರ, ರುದ್ರೇಶ್ ಕಹಳೆ,ಸತೀಶ್ ಪಟೇಲ್ ಇದ್ದರು.
ಈ ಸಂದರ್ಭದಲ್ಲಿ ಕುದುರೆಮುಖ ವೃತ್ತ ನಿರೀಕ್ಷಕ ರಮೇಶ್ ಕುಮಾರ್, ಖಾದರ್ ಕೋಟೆಹೊಳೆ, ಅಹ್ಮದ್ ಭಾವಾ ಕಲ್ಮಕ್ಕಿ, ಶರೀಫ್, ಚಂದ್ರಮೋಹನ್ ಅವರನ್ನು ಗೌರವಿಸಲಾಯಿತು.ಅಲ್ಲದೆ ಕಳೆದ 31 ವರ್ಷಗಳಿಂದ ಕನ್ನಡ ಸಂಘ ಕಟ್ಟಿ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿರುವ ಕನ್ನಡ ರಾಜು ಅವರನ್ನು ಕುದುರೆಮುಖ ವೃತ್ತ ನಿರೀಕ್ಷಕ ರಮೇಶ್ ಕುಮಾರ್ ಅವರು ಗೌರವಿಸಿದರು.ಅಲ್ಲದೆ ಇದೆ ಸಂದರ್ಭದಲ್ಲಿ ಸೈರನ್ ಚಿತ್ರದ ಟೀಜರ್ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ನಂತರ ಅಪ್ಪು ಡ್ಯಾನ್ಸ್ ಕ್ಲಾಸ್ ಕಳಸ ಅವರಿಂದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ ನಡೆಯಿತು.