ಕಳಸ ಲೈವ್ ವರದಿ
ಕಳಸದ ಗೇರುತೋಟ ಪ್ರದೇಶದಲ್ಲಿ ಗೋಶಾಲೆ ನಿರ್ಮಿಸಲು ಜಾಗ ಗುರುತಿಸಲಾಗಿದೆ ಎಂದು ಬಜರಂಗದಳ ಜಿಲ್ಲಾ ಗೋರಕ್ಷಾ ಪ್ರಮುಖ್ ಅಜಿತ್ ಕುಲಾಲ್ ತಿಳಿಸಿದ್ದಾರೆ.
ಬಜರಂಗದಳ ಮತ್ತು ವಿಶ್ವಹಿಂದೂಪರಿಷತ್ ಕಳಸ ಘಟಕವು ತಾಲ್ಲೂಕಿನ ಜಾನುವಾರುಗಳ ರಕ್ಷಣೆಗೆ ಗೋಶಾಲೆ ನಿರ್ಮಿಸಲು ಭೂಮಿ ನೀಡಲು ಶಾಸಕರಿಗೆ, ಸಂಸದರಿಗೆ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿಗೆ ಮನವಿಯನ್ನು ಸಲ್ಲಿಸಲಾಗಿತ್ತು.
ಕಳಸ ತಾಲ್ಲೂಕಿನ ಕೃಷಿಕರು ಗೋವು ಸಾಕಲು ಕಷ್ಟವಾಗಿರುವುದರಿಂದ ಅವು ಪೇಟೆ ಪಟ್ಟಣ ಸೇರುತ್ತಿವೆ.ಇದರಿಂದ ಸಲೀಸಾಗಿ ಗೋಕಳ್ಳರ ಪಾಲಾಗುತ್ತಿದೆ.ಇದನ್ನು ತಪ್ಪಿಸಲು ಗೋಶಾಲೆಗೆ ಭೂಮಿ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಬಜರಂಗದಳ, ವಿಶ್ವಹಿಂದೂ ಪರಿಷತ್ ಮನವಿಯನ್ನೂ ಸಲ್ಲಿಸಿತ್ತು.ಆ ಮನವಿಗೆ ಸ್ಪಂದಿಸಿದ ಕಂದಾಯ ಇಲಾಖೆಯು ಕಳಸ-ಕಳಕೋಡು ರಸ್ತೆಯ ಗೇರುತೋಟ ಪ್ರದೇಶದಲ್ಲಿ ಮಂಗಳವಾರ ಸ್ಥಳ ಪರಿಶೀಲನೆ ಮಾಡಿದೆ.
ಈ ಪ್ರದೇಶದಲ್ಲಿ 56 ಎಕರೆ ಗೋಮಾಳ ಭೂಮಿ ಇದ್ದು ಅದನ್ನು ಸಂಪೂರ್ಣವಾಗಿ ಗೋಶಾಲೆಗೆ ನೀಡುವಂತೆ ಮನವಿ ಮಾಡಿದ್ದೇವೆ. ಕಂದಾಯ ಇಲಾಖೆ ಸಿಬ್ಬಂದಿ ಕೂಡ ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ಕೆಲಸದಲ್ಲಿ ನಮಗೆ ಸಹಕಾರ ನೀಡುತ್ತಿರುವ ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಎಂ.ಕೆ.ಪ್ರಾಣೇಶ್, ಬಿಜೆಪಿ ಮುಖಂಡ ಹೆಮ್ಮಕ್ಕಿ ಗಿರೀಶ್ ಅವರಿಗೆ ಹಾಗೂ ಗೋ ಶಾಲೆಗೆ ಎಲ್ಲ ನೆರವು ನೀಡುತ್ತಿರುವ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಕಳಸದ ಎಲ್ಲ ಗ್ರಾಮಸ್ಥರಿಗೂ ಬಜರಂಗದಳ ಕೃತಜ್ಞತೆ ಸಲ್ಲಿಸಿದೆ.