ಕಳಸ ಲೈವ್ ವರದಿ
ಡಾ||ರಾಜ್ ಕನ್ನಡ ಸಂಘ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ)ಇವರ 31ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಡಿಸೆಂಬರ್ 12ರಂದು ದುರ್ಗಾಮಂಟಪದಲ್ಲಿ ನಡೆಯಲಿದೆ ಎಂದು ಡಾ|| ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು ತಿಳಿಸಿದ್ದಾರೆ.
ಅಂದು ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕರವೇ(ಪ್ರವೀಣ್ ಶೆಟ್ಟಿ ಬಣ) ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ,ಉಪಾಧ್ಯಕ್ಷ ಶಿವರಾಜೇಗೌಡರು ಆಗಮಿಸಲಿದ್ದಾರೆ.ಹಾಗೂ ಸ್ಥಳಿಯ ಹಾಗು ಜಿಲ್ಲೆಯ ವಿವಿಧ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರುತ್ತಾರೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅಪ್ಪು ಡ್ಯಾನ್ಸ್ ಕ್ಲಾಸ್ ಕಳಸ ಇವರಿಂದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ ಇರಲಿದೆ.ವಿಶೇಷ ಆಕರ್ಷಣೆಯಾಗಿ ಸೈರನ್ ಚಿತ್ರದ ನಟ ಪ್ರವೀಶ್ ಶೆಟ್ಟಿ ಹಾಗೂ ಚಿತ್ರನಟ ಧರ್ಮ ಇರಲಿದ್ದಾರೆ ಎಂದು ತಿಳಿಸಿದ್ದಾರೆ.