ಕಳಸ ಲೈವ್ ವರದಿ
ಕಿಲ್ಲೂರು ಮಿತ್ತಬಾಗಿಲು ಗ್ರಾಮದ ಗುಡ್ಡಕರೆ ರಮೇಶ್ ಎಂಬುವವರ ಮನೆಯಲ್ಲಿ ಕಾಣಿಸಿಕೊಂಡಿದ್ದ ಭಾರಿ ಗಾತ್ರದ ಹೆಬ್ಬಾವೊಂದನ್ನು ಕೊಲ್ಲಿ ಕಿಲ್ಲೂರು ಶೌರ್ಯ ತಂಡದ ಸಂಯೋಜಕ ಉಮೇಶ್ ಮಾಲೂರು ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಿತ್ತಬಾಗಿಲು ಮಲವಂತಿಗೆ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಅಲ್ಲಲ್ಲಿ ಭಾರಿ ಗಾತ್ರದ ಹೆಬ್ಬಾವುಗಳು ಕಾಣಿಸಿಕೊಳ್ಳುತ್ತಿದ್ದು, ಶನಿವಾರ ಗುಡ್ಡಕರೆ ರಮೇಶ್ ಎಂಬುವವರ ಮನೆ ಸಮಿಪವೂ ಕಂಡು ಬಂದಿತ್ತು. ಇದರಿಂದ ಮನೆಯವರು ಭಯಭೀತರಾಗಿದ್ದರು. ಈ ಸಂದರ್ಭದಲ್ಲಿ ಶೌರ್ಯ ತಂಡದ ಸಂಯೋಜಕ ಉಮೇಶ್ ಮಾಲೂರು ಸ್ಥಳಕ್ಕೆ ಬಂದು ಹಾವನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಟ್ಟರು.
Related Stories
September 6, 2024