ಕಳಸ ಲೈವ್ ವರದಿ
ಕಳೆದೆರಡು ತಿಂಗಳುಗಳಿಂದ ಕಳಸ ಭಾಗದಲ್ಲಿ ಸಂಚಾರ ಮಾಡುತ್ತಿರುವ ಎರಡು ಕಾಡಾನೆಗಳು ವಶಿಷ್ಠಾಶ್ರಮ ಸಂಜೀವ ಮೆಟ್ಟಿಲ ಬಳಿ ಶನಿವಾರ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರು ಸೆರಿ ಕಾಡಿಗಟ್ಟುತ್ತಿದ್ದಾರೆ.
ಕಳೆದ ನಾಲ್ಕು ದಿನದಿಂದ ಕಾಡಾನೆಗಳು ಹಳುವಳ್ಳಿ, ಕೊಂಡದಮನೆ ಪ್ರದೇಶದಲ್ಲಿ ಕಂಡು ಬಂದಿದ್ದು ಶನಿವಾರ ವಶಿಷ್ಠಾಶ್ರಮದ ಬಳಿ ಭದ್ರಾ ನದಿಯ ಬಳಿ ಕಾಣಿಸಿಕೊಂಡಿದೆ.ಸುದ್ಧಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಕಾಡಿಗಟ್ಟುವ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಈ ಪ್ರದೇಶದಲ್ಲಿ ಭತ್ತದ ಗದ್ದೆಯಲ್ಲಿ ಸಂಚರಿಸಿ ಭತ್ತ ಕೃಷಿಯನ್ನು ನಾಶ ಪಡಿಸಿವೆ. ಭತ್ತ, ಅಡಕೆ, ಬಾಳೆ ಮುಂತಾದ ಕೃಷಿಯನ್ನು ಹಾನಿ ಮಾಡಿವೆ.
ಎರಡು ತಿಂಗಳಿನಿಂದ ಹಳುವಳ್ಳಿ, ಮಾವಿನಕೆರೆ, ಮಾಗಲು, ಗಣಪತಿಕಟ್ಟೆ, ಅಬ್ಬುಗುಡಿಗೆ, ಎಸ್.ಕೆ.ಮೇಗಲ್, ನೆಲ್ಲಿಬೀಡು, ಜಾಂಬ್ಲೆ, ಕುದುರೆಮುಖ ಮುಂತಾದ ಪ್ರದೇಶಗಳಿಗೆ ತೆರಳಿ ಅಲ್ಲಿ ಸಾಕಷ್ಟು ಪ್ರಮಾಣದ ಕೃಷಿಗಳನ್ನು ಹಾನಿ ಮಾಡಿವೆ.
ಅಲ್ಲದೆ ಹೆಮ್ಮಕ್ಕಿ ಪ್ರದೇಶದಲ್ಲೂ ಶುಕ್ರವಾರದ ರಾತ್ರಿ ಮೂರು ಕಾಡಾನೆಗಳು ಕಾಣಿಸಿಕೊಂಡಿದ್ದು, ಅಲ್ಲಿಯು ಸಾಕಷ್ಟು ಕೃಷಿ ಭೂಮಿಯನ್ನು ಹಾನಿ ಮಾಡಿವೆ ಎನ್ನಲಾಗುತ್ತಿದೆ.