ಕಳಸ ಲೈವ್ ವರದಿ
ಕಳಸ ತಾಲೂಕಿನ ಬಾಳೆಹೊಳೆಯಲ್ಲಿ ಗುರುವಾರ ನಡೆದ ಮದುವೆ ಅರತಕ್ಷತೆಗೆ ಬಂದ ವ್ಯಕ್ತಿ ಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಚಿಕ್ಕಮಗಳೂರು ಕೃಷ್ಣ ಕಾರಂತ(65) ಎಂದು ತಿಳಿದು ಬಂದಿದೆ.
ಗುರುವಾರ ಬಾಳೆಹೊಳೆ ಚನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ಮದುವೆಯ ಅರತಕ್ಷತೆ ನಡೆದಿತ್ತು. ಈ ಅರತಕ್ಷತೆಗೆ ಬಂದಿದ್ದ ವ್ಯಕ್ತಿ ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಅಲ್ಲೇ ಪಕ್ಕದಲ್ಲಿ ಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಂದೂವರೆ ವರ್ಷದ ಹಿಂದೆ ಕೊರೋನದ ಸಂದರ್ಭದಲ್ಲಿ ಇವರ ಪತ್ನಿ ತೀರಿಕೊಂಡಿದ್ದು, ಇದರಿಂದಲೇ ಮಾನಸೀಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗಿದೆ.
ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Related Stories
September 6, 2024