ಕಳಸ ಲೈವ್ ವರದಿ
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ನೇತ್ರತ್ವದಲ್ಲಿ ಡಿ 6 ರಿಂದ 8ರ ವರೆಗೆ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನ ಹಾಗೂ ದತ್ತ ಜಯಂತಿ ಅಂಗವಾಗಿ ಕಳಸದಲ್ಲಿ ನಾಳೆ (ಡಿ 6) ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಮುಖ್ಯ ರಸ್ತೆಗಳು ಕೇಸರಿಮಯವಾಗಿದೆ.
ಕಳಸ ಮುಖ್ಯ ರಸ್ತೆ, ಮಂಜಿನಕಟ್ಟೆ, ಕುದುರೆಮುಖ ರಸ್ತೆ, ಹೊರನಾಡು ರಸ್ತೆ ಮುಂತಾದೆಡೆ ಕೇಸರಿ ಬಂಟಿಂಗ್ಸ್ ರಾರಾಜಿಸುತ್ತಿದೆ.
ಡಿಸೆಂಬರ್ 6ರಂದು ಸಂಜೆ 4 ಗಂಟೆಗೆ ಕಳಸ ಪಟ್ಟಣದಲ್ಲಿ ಬೃಹತ್ ಶೋಭಾಯಾತ್ರೆ, ನಂತರ ದುರ್ಗಾ ಮಂಟಪದಲ್ಲಿ ಧಾರ್ಮಿಕ ಪ್ರವಚನ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಮುಖಂಡರಾದ ಶರಣ್ ಪಂಪ್ವೆಲ್, ಮಾಣಿಲ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಭಾಗವಹಿಸಿ ಮಾತನಾಡಲಿದ್ದಾರೆ.
ಮೂಡುಬಿದರೆಯ ಕುಣಿತ ಭಜನೆ, ಪುತ್ತೂರು ನಾಸಿಕ್ ತಂಡ ಮತ್ತು ಸಿಂಗಾರಿ ಚಂಡೆ ತಂಡ ಮೆರವಣಿಗೆಯ ಆಕರ್ಷಣೆ ಆಗಿರುತ್ತದೆ.ಎಲ್ಲ ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಕಳಸ ಘಟಕ ಕೋರಿದೆ.