ಕಳಸ ಲೈವ್ ವರದಿ
ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮೂಡಿಗೆರೆ ಕಳಸ ಎ ವಲಯದ ತೋಟದೂರು ಗ್ರಾಮ ಪಂಚಾಯತಿ ಪಡೀಲ್ ಗ್ರಾಮದ ಸಮುದಾಯ ಭವನ ದಲ್ಲಿ ಜೇನುಗೂಡು ಜ್ಞಾನ ವಿಕಾಸ ಕೇಂದ್ರ ತೋಟದೂರು, ಸ್ವಸಾಯ ಹಾಗೂ ಪ್ರಗತಿ ಬಂದು ಸಂಘಗಳ ಒಕ್ಕೂಟ ತೋಟ ದೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಹೊಲಿಗೆ ತರಬೇತಿ ಸಮಾರೋಪ ಸಮಾರಂಭ ಕಾರ್ಯಕ್ರಮ ಜರಗಿತ್ತು.
ಯೋಜನಾಧಿಕಾರಿ ಶಿವಾನಂದ ಪಿ. ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋಟದೂರು ಒಕ್ಕೂಟದ ಉಪಾಧ್ಯಕ್ಷರಾದ ಶ್ರೀಕಾಂತ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಳಸ ಪೆÇಲೀಸ್ ಠಾಣೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಡಾ.ಮೋಹನ್ ರಾಜಣ್ಣ ಮಾತನಾಡಿ ಬಡತನ ನಿವಾರಣೆಗಾಗಿ ಸ್ವ ಸಹಾಯ ಸಂಘ ದ ಸದಸ್ಯರು ಹಣಬೆ ಬೇಸಾಯ. ಜೇನು ಸಾಕಾಣಿಕೆ. ಕೋಳಿ. ಹಂದಿ. ಕುರಿ ಮತ್ತು ಜಾನುವಾರು ಸಾಕಾಣಿಕೆ ಮಾಡಿ ಮತ್ತು ಟೈಲರಿಂಗ್. ಚಪಾತಿ. ಹಪ್ಪಳ. ರೊಟ್ಟಿ. ಸೆಂಡಿಗೆ ಮಾಡಿ ಸ್ವ ಉದ್ಯೋಗ ಮಾಡಿ ಹಾಗೂ ಸರ್ಕಾರ ದಿಂದ ಧನ ಸಹಾಯ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸಾವಿತ್ರಿ, ತೋಟದೂರು ಗ್ರಾಮ ಪಂಚಾಯಿತಿಯ ಸದಸ್ಯೆ ಸುನಂದ, ಕಳಸ ಎ ವಲಯದ ಮೇಲ್ವಿಚಾರಕರಾದ ಶ್ರೀನಿವಾಸ್, ಸ್ವಾಗತ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಕು!! ಚೈತ್ರ, ತೋಟ ದೂರು ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿ ಅಭಿμÉೀಕ್, ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.