ಕಳಸ ಲೈವ್ ವರದಿ
‘ಜಾನಪದ ಕಲೆಗಳು ನಾಡಿನ ಕಲಾ ಶ್ರೀಮಂತಿಕೆಯ ಹಾಗೂ ಜೀವಂತ ಸಂಸ್ಕøತಿಯ ಪ್ರತೀಕ. ಮಲೆನಾಡಿನ ಜಾನಪದ ಕಲೆಗಳು ಎಲ್ಲೆಡೆಯೂ ಪ್ರಚಾರಗೊಳ್ಳುವ ಅಗತ್ಯವಿದೆ. ಜಾನಪದ ಸಾಂಸ್ಕøತಿಕ ವೈವಿಧ್ಯತೆಗೆ ಹಿಡಿದ ಕೈಗನ್ನಡಿ’ ಎಂದು ಶ್ರೀ ಕ್ಷೇತ್ರ ಹೊರನಾಡಿನ ರಾಜಲಕ್ಷ್ಮಿ ಬಿ. ಜೋಷಿ ಅಭಿಪ್ರಾಯ ಪಟ್ಟರು.
ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕøತಿಕ ವಿಭಾಗ, ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ, ಕಳಸದ ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚನ್ನರಾಯಪಟ್ಟಣದ ಪ್ರತಿಮಾ ಟ್ರಸ್ಟ್ನ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿ ಕೊಂಡಿದ್ದ ‘ಕಂಸಾಳೆ ನೃತ್ಯ ತರಬೇತಿ ಕಾರ್ಯಗಾರ’ ವನ್ನು ಉದ್ಘಾಟಿಸಿ ಮಾತನಾಡಿದರು. ಮಲೆನಾಡಿನ ವಿವಿಧ ಜಾನಪದ ಕಲೆಗಳನ್ನು ಬೇರೆಡೆ ಪ್ರದೇಶಗಳಲ್ಲಿ ಪ್ರದರ್ಶಿಸುವುದುರಿಂದ ಸಾಂಸ್ಕøತಿಕ ವಿನಿಮಯಕ್ಕೆ ವೇದಿಕೆ ದೊರೆತಂತಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಪ್ರತಿಮಾಟ್ರಸ್ಟ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಯತ್ನ ಶ್ಲಾಘನೀಯ ಎಂದು ಪ್ರಶಂಶಿಸಿದರು.
ಮುಖ್ಯ ಅತಿಥಿಯಾಗಿದ್ದ ಕಳಸ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಸುಜಯಾ ಸದಾನಂದ ಮಾತನಾಡಿ ಕಾರ್ಯಗಾರ ಯಶಸ್ವಿಯಾಗಲೆಂದು ಹಾರೈಸಿದರು.
ಕಾರ್ಯಗಾರದ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದ ಕಳಸ ತಾಲ್ಲೂಕು ಘಟಕದ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷೆ ಡಾ.ರಮ್ಯ ಹೆಚ್.ಬಿ. ಕಾರ್ಯಗಾರದ ಉದ್ದೇಶ ನಾಡಿನ ಶ್ರೀಮಂತ ಜಾನಪದ ಕಲೆಯಾದ ಕಂಸಾಳೆಯನ್ನು ಮಲೆನಾಡಿನ ಮಕ್ಕಳಿಗೆ ಪರಿಚಯಿಸುವುದೇ ಆಗಿದೆ ಎಂದರು.
ಚನ್ನರಾಯಪಟ್ಟಣದ ಪ್ರತಿಮಾ ಟ್ರಸ್ಟ್ ಮುಖ್ಯಸ್ಥರಾದ ಉಮೇಶ ತೆಂಕನಹಳ್ಳಿ ಮಾತನಾಡಿ ‘ಜಾನಪದ ಕಲೆಗಳ ಕಲಿಕೆಗೆ ಕಲಾ ಪ್ರೀತಿ, ತುಡಿತ ಹಾಗೂ ಬದ್ಧತೆ ಮುಖ್ಯ. ಕಲೆ ಉಳಿದಿರುವುದು ಜನರಕಲಾ ಪ್ರೀತಿಯಿಂದಲೇ ಹೀಗಾಗಿ ವಿದ್ಯಾರ್ಥಿಗಳು ಕಲಾ ಪ್ರೀತಿ ಬೆಳೆಸಿಕೊಳ್ಳಬೇಕು ಹಾಗೂ ಜಾನಪದ ಕಲೆ ಕಲಿಯಲು ಆಸಕ್ತಿ ತೊರಬೇಕು. ಈ ನಿಟ್ಟಿನಲ್ಲಿ ಕಳಸದಲ್ಲಿ ಕಂಸಾಳೆ ತರಬೇತಿ ಕಾರ್ಯಗಾರ ಒಂದು ಕಿರು ಪ್ರಯತ್ನ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ ಎಸ್. ವಹಿಸಿದ್ದರು. ಕ.ಸಾ.ಪ ಮಹಿಳಾ ಅಧ್ತಕ್ಷೆ ಮಮ್ತಾಜ್ ಬೇಗಂ, ಕ.ಸಾ.ಪ ಹೋಬಳಿ ಘಟಕದ ಅಧ್ಯಕ್ಷ ಶೇಖರ್ ಶೆಟ್ಟಿ, ಕ.ಸಾ.ಪ ತಾಲ್ಲೂಕು ಘಟಕದ ಕೋಶಾಧ್ಯಕ್ಷ ಕಿರಣ್ ಶೆಟ್ಟಿ, ಕಾಲೇಜು ಸಿ.ಡಿ.ಸಿ ಸದಸ್ಯ ಸುರೇಶಗೌಡ, ಪ್ರತಿಮಾ ಟ್ರಸ್ಟಿನ ಎ.ಎಲ್. ನಾಗೇಶ್, ಬಿ. ಜಗದೀಶ್ ಚಂದ್ರ, ಪೋಷಕರ ವೇದಿಕೆ ಅಧ್ಯಕ್ಷ ಅಜಿತ್ ಪ್ರಸಾದ್, ಐ.ಕ್ಯೂ.ಎ.ಸಿ ಸಂಚಾಲಕ ಡಾ. ಆದಿತ್ಯ ಅಡಿಗ, ವಿದ್ಯಾರ್ಥಿಗಳಾದ ಕವನ, ಕಾವ್ಯ, ಸುರಭಿ ಜೈನ್ ಉಪಸ್ಥಿತರಿದ್ದರು. ಚನ್ನರಾಯಪಟ್ಟಣದ ಪ್ರತಿಮಾಟ್ರಸ್ಟ್ನ ಕಲಾ ತಂಡ ನಡೆಸಿಕೊಟ್ಟ ಆಕರ್ಷಕ ಜಾನಪದ ಕಲಾ ಪ್ರದರ್ಶನ ಸಭಿಕರ ಮನಸೂರೆಗೊಂಡಿತು.