ಕಳಸ ಲೈವ್ ವರದಿ
ಇಲ್ಲಿನ ವೆಂಕಟರಮಣ ದೇವಸ್ಥಾನದಲ್ಲಿ ಸೋಮವಾರ ಬಜರಂಗದಳ ಕಾರ್ಯಕರ್ತರು ದತ್ತಮಾಲೆ ಧಾರಣೆ ಮಾಡಿದರು.
30 ದತ್ತಭಕ್ತರು ಮಾಲೆ ಧಾರಣೆ ಮಾಡಿ ದತ್ತಪೀಠ ದರ್ಶನ ಮಾಡುವ ವ್ರತ ಸ್ವೀಕರಿಸಿದರು. ಜಿಲ್ಲಾ ಗೋರಕ್ಷಕ ಪ್ರಮುಖ ಅಜಿತ್ ಕುಲಾಲ್, ತಾಲ್ಲೂಕು ಸಂಯೋಜಕ ಸಂತೋμï, ಸಹ ಸಂಯೋಜಕ ಚೇತನ್, ಪ್ರದೀಪ್, ಸುನಿಲ್ ಮತ್ತಿತರರು ಇದ್ದರು.
ಡಿಸೆಂಬರ್ 6ರಂದು ಸಂಜೆ 4 ಗಂಟೆಗೆ ಕಳಸ ಪಟ್ಟಣದಲ್ಲಿ ಬೃಹತ್ ಶೋಭಾಯಾತ್ರೆ ಮ್ತು ಧಾರ್ಮಿಕ ಪ್ರವಚನ ಆಯೋಜಿಸಿದೆ.ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಮುಖಂಡರಾದ ಶರಣ್ ಪಂಪ್ವೆಲ್, ಮಾಣಿಲ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಭಾಗವಹಿಸಿ ಮಾತನಾಡಲಿದ್ದಾರೆ.
ಮೂಡುಬಿದರೆರಯ ಕುಣಿತ ಭಜನೆ, ಪುತ್ತೂರು ನಾಸಿಕ್ ತಂಡ ಮತ್ತು ಸ್ವಾಮಿ ಸಿಂಗಾರಿ ಚಂಡೆ ತಂಡ ಮೆರವಣಿಗೆಯ ಆಕರ್ಷಣೆ ಆಗಿರುತ್ತದೆ.ಎಲ್ಲ ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಕಳಸ ಘಟಕ ಕೋರಿದೆ.