ಕಳಸ ಲೈವ್ ವರದಿ
ಕಳಸ ಸಮೀಪದ ಪುರಾಣ ಪ್ರಸಿದ್ಧ ಹಳುವಳ್ಳಿ ಶ್ರೀಮಹಾಗಣೇಶ್ವರ ಸಮೇತ ಸುಬ್ರಹ್ಮಣ್ಯೇಶ್ವರ ಸ್ವಾಮಿಯವರ ಮಹಾ ರಥೋತ್ಸವವು ಮಂಗಳವಾರ ಅತ್ಯಂತ ಸಡಗರ ಸಂಭ್ರಮದಿಂದ ನೆರವೇರಿತು.
ಸೋಮವಾರ ಗಣಪತಿಹೋಮ ದಿಂಡಿ ಉತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿತು.್ತ
ಮಂಗಳವಾರ ವಿವಿಧ ಧಾರ್ಮಿಕ,ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡ ಮಹಾ ರಥೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು. ಮಧ್ಯಾಹ್ನ ಮಂಗಳಾರತಿ ಮುಗಿದ ಬಳಿಕ ಸುಬ್ರಹ್ಮಣ್ಯ ದೇವರ ವಿಗ್ರಹವನ್ನು ಹೊತ್ತುಕೊಂಡು ಚತ್ರಿ ಚಾಮರ ಮಂಗಳ ವಾಧ್ಯಗಳೊಂದಿಗೆ ದೇವಸ್ಥಾನದಲ್ಲಿ ಸುತ್ತು ಸೇವೆ ನಡೆಸಿ,ನಂತರ ಸಿಂಗಾರಗೊಂಡ ಬ್ರಹ್ಮ ರಥದಲ್ಲಿ ಇಟ್ಟು ಪೂಜಿಸಲಾಯಿತು,
ರಥೋತ್ಸವ ನಡೆಯುವ ಮೊದಲು ಬ್ರಹ್ಮ ರಥದ ನೇರಕ್ಕೆ ಬಾನೆತ್ತರದಲ್ಲಿ ಗರುಡ ಮೂರು ಬಾರಿ ಪ್ರದಕ್ಷಿಣೆ ಹಾಕಿದ ನಂತರ ಸುಬ್ರಹ್ಮಣ್ಯ ರಥೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಭಕ್ತಾದಿಗಳು ತಮ್ಮ ಹರಕೆಯಂತೆ ತಾವು ಬೆಳೆದ ಕಾಳು ಮೆಣಸು, ಏಲಕ್ಕಿ,ಅಡಿಕೆ,ಕಾಫಿ ಬೀಜ ಇತ್ಯಾದಿ ದವಸ ಧಾನ್ಯಗಳನ್ನು ರಥಕ್ಕೆ ಎಸೆದು ಕೃತಾರ್ಥರಾದರು,
ನೆರೆದ ಸಾವಿರಾರು ಭಕ್ತಾದಿಗಳು ರಥ ಎಳೆಯುವುದರೊಂದಿಗೆ ಕೃತಾರ್ಥರಾದರೆ,ತಮ್ಮ ಕಷ್ಟಕಾಲಕ್ಕೆ ಹರಕೆ ಹೊತ್ತುಕೊಂಡ ಭಕ್ತರು ಹಾವಿನ ಹೆಡೆ,ಹಾವಿನ ಮೊಟ್ಟೆ, ಮಗು ತೊಟ್ಟಿಲು ಮುಂತಾದ ಬೆಳ್ಳಿ ವಸ್ತುಗಳನ್ನು ಹರಕೆ ರೂಪದಲ್ಲಿ ದೇವರಿಗೆ ಅರ್ಪಿಸಿದರು.