ಕಳಸ ಲೈವ್ ವರದಿ
ಅಡಕೆ ಎಲೆಚುಕ್ಕಿ ರೋಗದಿಂದ ಬೇಸೆತ್ತು ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಸಂಸೆಯ ನಸುಗುಣಿ ನಿವಾಸಿ ಶಂಕರೇಗೌಡರ ಮನೆಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಬೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿ ಸೂಕ್ತ ಪರಿಹಾರ ಕೊಡಿಸುವ ಬಗ್ಗೆ ಭರವಸೆ ನೀಡಿದರು.
ಶಂಕರೇಗೌಡರಿಗೆ ನಾಲ್ಕು ಎಕರೆ ಜಂಟಿ ಖಾತೆಯಲ್ಲಿ ಅಡಕೆ ತೋಟವಿತ್ತು. ತೋಟಕ್ಕೆ ಇತ್ತೀಚೆಗೆ ತಗುಲಿದ ಎಲೆಚುಕ್ಕಿ ರೋಗದ ಬಗ್ಗೆ ಮನೆಯಲ್ಲಿ ಆಗಾಗ ಬೇಸರ ವ್ಯಕ್ತಪಡಿಸುತ್ತಿದ್ದರು. ಭಾನುವಾರ ತನ್ನ ಮನೆಯ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತ ದೇಹ ಕಂಡು ಬಂದ ಹಿನ್ನಲೆಯಲ್ಲಿ ಎಲೆಚುಕ್ಕಿ ರೋಗದಿಂದ ಬೇಸೆತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಸೋಮವಾರ ಬೆಳಿಗ್ಗೆಯೇ ಶಾಸಕ ಎಂ.ಪಿ.ಕುಮಾರಸ್ವಾಮಿ ಮೃತನ ಮನೆಗೆ ಬೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದರು.ಈ ಸಂದರ್ಬದಲ್ಲಿ ಬಿ.ಕೆ. ಮಹೇಶ್, ರಂಗನಾಥ್ ಇದ್ದರು.