ಕಳಸ ಲೈವ್ ವರದಿ
ಕರ್ನಾಟಕ ಇತಿಹಾಸ ಅಕಾಡೆಮಿಯ 36ನೇ ವಾರ್ಷಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಇದೇ 24ರಿಂದ 26ರವರೆಗೆ ಹೊರನಾಡಿನಲ್ಲಿ ನಡೆಯಲಿದೆ.
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಹಾಗೂ ಕರ್ನಾಟಕ ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ಸಹಯೋಗದಲ್ಲಿ ಸಮ್ಮೇಳನ ನಡೆಯುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಶಾಸನ ತಜ್ಞ ಡಾ.ಕೆ.ಆರ್.ಗಣೇಶ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು 3 ದಿನದ ಸಮ್ಮೇಳನದಲ್ಲಿ 18 ಗೋಷ್ಟಿಗಳು ನಡೆಯಲಿವೆ.150ಕ್ಕೂ ಹೆಚ್ಚು ಇತಿಹಾಸ ಸಂಶೋಧಕರು ತಮ್ಮ ಪ್ರಬಂಧ ಮಂಡನೆ ಮಾಡಲಿದ್ದಾರೆ ಎಂದೂ ಅವರು ಮಾಹಿತಿ ನೀಡಿದರು.
24ರಂದು ಬೆಳಿಗ್ಗೆ 10 ಗಂಟೆಗೆ ಹೊರನಾಡಿನ ಜಿ.ಭೀಮೇಶ್ವರ ಜೋಷಿ ಸಮ್ಮೇಳನ ಉದ್ಘಾಟಿಸಲಿದ್ದು, ಇತಿಹಾಸ ದರ್ಶನ ಸಂಪುಟ 37ರ ಬಿಡುಗಡೆಯನ್ನು ಪುರಾತ್ವ ಸಂಗ್ರಾಹಲಯದ ಆಯುಕ್ತರಾದ ಎ. ದೇವರಾಜು ಮಾಡಲಿದ್ದಾರೆ. ಅಖಿಲ ಭರತ 71ಬೇ ಸಮ್ಮೇಲನಾಧ್ಯಕ್ಷರಾದ ನಾಡೋಜ ಡಾ. ಕಮಲಾ ಹಂಪನಾ ಸದಸ್ಯರ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.ನಾಡೋಜ ಹಂಪ ನಾಗರಾಜಯ್ಯ ಮತ್ತು ಶಾಸನ ತಜ್ಞ ಎಚ್.ಎಸ್.ಗೋಪಾಲರಾವ್ ಅವರಿಗೆ ‘ಇತಿಹಾಸ ಸಂಸ್ಕ್ರತಶ್ರೀ’ ಪ್ರಶಸ್ತಿ ನೀಡಲಾಗುತ್ತದೆ. ಡಾ.ಡಿ.ಎಂ.ನಾಗರಾಜು ಅವರಿಗೆ ಡಾ.ಬಾ.ರಾ. ಗೋಪಾಲ್ ಶಾಸನ ದತ್ತಿ ಪ್ರಶಸ್ತಿ, ಡಾ.ಆರ್. ಗೋಪಾಲ್ ಅವರಿಗೆ ಸಂಶೋಧನ ಶ್ರೀ, ಡಾ. ಎಂ.ಕೆ.ದುರುಗಪ್ಪ ಅವರಿಗೆ ನಾಯಕ ಶ್ರೀ, ಡಾ.ಡಿ.ಎನ್.ಯೋಗೀಶ್ವರಪ್ಪ ಅವರಿಗೆ ನೊಳಂಬಶ್ರೀ, ಡಾ.ಎಸ್.ಎಲ್.ಶ್ರೀನಿವಾಸ ಮೂರ್ತಿ ಅವರಿಗೆ ಡಾ.ಶ್ರೀನಿವಾಸ ಹಾವನೂರ ಸ್ಮರನಾರ್ಥ ಪ್ರಶಸ್ತಿ, ಡಾ.ಎನ್.ಆರ್.ಲಲಿತಾಂಬ ಅವರಿಗೆ ಶ್ರೀಮತಿ ಸುಮಂಗಲ ಪಟೀಲ ಮಹಿಳ ಪ್ರಶಸ್ತಿ, ಡಾ.ಜಗದೀಸ ಅಗಸಿಬಾಗಿಲವರ ಅವರಿಗೆ ಸೂರ್ಯಕೀರ್ತಿ ಪಗರಶಸ್ತಿ, ಎಂ.ಎನ್.ಪ್ರಭಾಕರ್ ಅವರಿಗೆ ಡಾ.ಪ್ರತಿಭ ಚಿಣ್ಣಪ್ಪ ಸ್ಮರಣಾರ್ಥ ಪ್ರಶಸ್ತಿ, ಪ್ರವೀಣ್ ಕುಮಾರ್ ಅವರಿಗೆ ಡಾ.ಎಂ.ಎಚ್.ಕೃಷ್ಣ ಮೆರೆಟ್ ಅವಾರ್ಡ್ ನೀಡಲಾಗುತ್ತದೆ.
26ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ 18 ಮಂದಿ ಪಿಹೆಚ್.ಡಿ ಮತ್ತು ಡಿ.ಲಿಟ್ ಪದವೀಧರರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಎಂದು ಅಕಾಡೆಮಿ ಕಾರ್ಯದರ್ಶಿ ಜಿ.ಕೆ.ದೇವರಾಜಸ್ವಾಮಿ ತಿಳಿಸಿದರು.
ಇತಿಹಾಸ ಸಂಶೋಧನೆಯ ಬಗ್ಗೆ ಅವಿರತ ಕೆಲಸ ಮಾಡುತ್ತಿರುವ ಅಕಾದೆಮಿಯ ವಾರ್ಷಿಕ ಸಮ್ಮೇಳನವನ್ನು ಶ್ರೀ ಕ್ಷೇತ್ರ ಹೊರನಾಡು ಪ್ರಾಯೋಜಿಸುತ್ತಿರುವುದು ಹೆಮ್ಮೆ ಆಗಿದೆ.ಇತಿಹಾಸದ ಬೆಳಕಿನಲ್ಲಿ ವಾಸ್ತವಿಕತೆಯ ಮತ್ತು ಭವಿಷ್ಯದ ಸ್ಪಷ್ಟತೆ ಹೊಂದಲು ಸಮ್ಮೇಳನ ಸಹಕಾರಿ ಆಗಲಿದೆ ಎಂದು ದೇವಸ್ಥಾನದ ಮುಖ್ಯಸ್ಥ ಜಿ.ಭೀಮೇಶ್ವರ ಜೋಷಿ ತಿಳಿಸಿದರು.
ಅಕಾದೆಮಿ ಸದಸ್ಯ ಹೆಚ್.ಆರ್.ಪಾಂಡುರಂಗ ಇದ್ದರು.