ಕಳಸ ಲೈವ್ ವರದಿ
ಕಳಸದಲ್ಲಿ ಬುಧವಾರದ ಬೆಳಗ್ಗಿನ ಜಾವ ಅಯ್ಯಪ್ಪ ಸ್ವಾಮಿ ಯಾತ್ರೆ ಕೈಗೊಳ್ಳಲು 18 ಕ್ಕೂ ಹೆಚ್ಚು ಭಕ್ತಾಧಿಗಳು ಶ್ರೀ ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವುದರ ಮುಖಾಂತರ ಅಯ್ಯಪ್ಪ ಸ್ವಾಮಿ ವೃತ ಮಾಲಾಧಾರಣೆಗೆ ಚಾಲನೆ ನೀಡಲಾಯಿತು.
ಗುರುಸ್ವಾಮಿ ರುದ್ರಯ್ಯ ಆಚಾರ್ ಬುಧವಾರ ಬೆಳಗ್ಗಿನ ಚಾವ ಪಟ್ಟಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ರೀತಿಯ ಸಂಪ್ರದಾಯ ಪೂಜಾ ವಿಧಿ ವಿಧಾನಗಳನ್ನು ನಡೆಸಿ ನಂತರ ಅಯ್ಯಪ್ಪ ಸ್ವಾಮಿ ವೃತ ಕೈಗೊಳ್ಳುವವರಿಗೆ ಮಾಲಾಧಾರಣೆಯನ್ನು ಮಾಡಿದರು.
ಇದೇ ರೀತಿ ಹಿರೇಬೈಲ್ ನಲ್ಲಿ ಗುರುಸ್ವಾಮಿ ಜಗದೀಶ್ ಭಂಡಾರಿ ಅವರು 15 ಜನ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಮಾಲಾಧಾರಣೆ ಮಾಡಿದರು.
ಇದರೊಂದಿಗೆ ಅಯ್ಯಪ್ಪ ಭಕ್ತರು 41 ದಿನಗಳ ಕಾಲ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಠಿಣ ವೃತವನ್ನು ಕೈಗೊಂಡು ಅಯ್ಯಪ್ಪ ಸ್ವಾಮಿಯ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ.