ಕಳಸ ಲೈವ್ ವರದಿ
ಕುದುರೆಮುಖ ಸಮೀಪದ ಜಾಂಬಳೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಮಂಗಳೂರು,ಉಡುಪಿ ಮೂಲದ ಮೇಕ್ ಸಮ್ಒನ್ ಸ್ಮೈಲ್ ತಂಡವು ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶಿಷ್ಟವಾಗಿ ಆಯೋಜಿಸಿತ್ತು.
ಮೇಕ್ ಸಮ್ ಒನ್ ಸ್ಮೈಲ್ ತಂಡವು 1.20 ಲಕ್ಷ ವೆಚ್ಚದಲ್ಲಿ ಜಾಂಬಳೆ ಶಾಲೆಗೆ ಬಣ್ಣ ಬಳಿದು, ಜೊತೆಗೆ ಅಲ್ಲಲ್ಲಿ ಸಾಧಕರ ಚಿತ್ರಗಳನ್ನು ಕೂಡ ಚಿತ್ರಿಸಿ, ಇಡೀ ಶಾಲೆಯ ಹೊರರೂಪವನ್ನೇ ಈ ತಂಡ ಬದಲಿಸಿತ್ತು.
ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಚಿತ್ರನಟ ರಾಜ್. ಬಿ ಶೆಟ್ಟಿ ಮತ್ತು ನಿರ್ಮಾಪಕ ರವಿ ರೈ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಕೇಕ್ ಕತ್ತರಿಸಿ ಮಕ್ಕಳ ಸಂಭ್ರಮಕ್ಕೆ ಕಾರಣರಾದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅ.ರಾ. ಸತೀಶ್ಚಂದ್ರ, ಸಾಹಿತಿ ಅ.ರಾ.ರಾಧಕೃಷ್ಣ, ವಲಯ ಅರಣ್ಯಾಧಿಕಾರಿ ಜ್ಯೋತಿ, ಪಂಚಾಯಿತಿ ಸದಸ್ಯೆ ಕಾಮಾಕ್ಷಿ ,ರೈತ ಸಂಘದ ಜಯಂತ್ ಗೌಡ, ಸುರೇಶ್ ಗೌಡ, ಶಾಲಾಭಿವೃದ್ಧಿ ಸಮಿತಿಯ ಮಹೇಂದ್ರ, ಸರಿತಾ ಮತ್ತಿತರರು ಇದ್ದರು.
ನೆಲ್ಲಿಬೀಡು ಕರ್ನಾಟಕ ರಕ್ಷಣಾ ವೇದಿಕೆ ಎಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿತ್ತು.