ಕಳಸ ಲೈವ್ ವರದಿ
ಕಳಸದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಮೆರವಣಿಗೆಯಲ್ಲಿ ಪುನೀತ್ ರಾಜ್ ಕುಮಾರ್ಗೆ ಕಳಸ ಬಿಜೆಪಿ ಮುಖಂಡರೊಬ್ಬರು ಅವಮಾನ ಮಾಡಿದ್ದಾರೆ ಇವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಡಾ.ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು ಆಗ್ರಹಿಸಿದ್ದಾರೆ.
ಕಳಸ ಹೈಸ್ಕೂಲ್ ಮುಂಭಾಗದಲ್ಲಿ ರಾಜ್ಯೋತ್ಸವದ ಮೆರವಣಿಗೆ ಹೊರಡುವಾಗ ವಿವಿಧ ಸ್ತಬ್ಧ ಚಿತ್ರಗಳಿದ್ದವು. ನಾನು ಕನ್ನಡದ ಮೆರು ನಟ ಪುನೀತ್ ರಾಜ್ ಕುಮಾರ್ ಅವರ ಭಾವ ಚಿತ್ರವನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಿದಾಗ ಬಿಜೆಪಿ ಮುಖಂಡರೊಬ್ಬರು ಆಕ್ಷೇಪ ಎತ್ತಿ ಮೆರವಣಿಗೆಯಲ್ಲಿ ಭಾವ ಚಿತ್ರವನ್ನು ಹಿಡಿದುಕೊಂಡು ಹೋಗಲು ಬಿಡಲಿಲ್ಲ.
ರಾಜ್ಯ ಸರ್ಕಾರ ನವಂಬರ್ ಒಂದರಂದು ಪುನೀತ್ ರಾಜ್ಕುಮಾರ್ಗೆ ಕರ್ನಾಟಕ ರತ್ನ ಬಿರುದು ನೀಡುತ್ತಿರುವುದು ಒಂದೆಡೆಯಾದರೆ. ಕಳಸದಲ್ಲಿ ಮಾತ್ರ ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪುನೀತ್ ರಾಜ್ ಕುಮಾರ್ ಭಾವ ಚಿತ್ರ ಹಿಡಿಯಲು ಆಕ್ಷೇಪ ಎತ್ತಿದ್ದಾರೆ.
ಇಂತಹ ಕನ್ನಡ ವಿರೋಧಿಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಕಳಸ ಪೊಲೀಸ್ ಠಾಣೆ ಮತ್ತು ಕಳಸ ತಹಶೀಲ್ದಾರ್ಗೆ ಮನವಿಯನ್ನು ನೀಡಿದ್ದಾರೆ.