ಕಳಸ ಲೈವ್ ವರದಿ
ಅಡಿಕೆ ಎಲೆ ಚುಕ್ಕಿ ರೋಗದ ಪರಿಹಾರಕ್ಕಾಗಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಮಂಗಳವಾರ ಶ್ರೀಮನ್ ಮಹಾ ಚಂಡಿಕಾ ಯಾಗ ನಡೆಯಿತು.
ಶ್ರೀ ಕ್ಷೇತ್ರದಲ್ಲಿ ಈ ರೋಗದ ಪರಿಹಾರಕ್ಕಾಗಿ ಬೆಳಿಗ್ಗೆಯಿಂದ ವಿವಿಧ ಪೂಜಾ ವಿಧಿ ವಿದಾನಗಳೊಂದಿಗೆ ಸಂಪುಟೀಕರಣ ಸಪ್ತಶತಿ ಪಾರಾಯಣ ನಡೆಸಿ ಪರಿಹಾರದ ಅಂಗವಾಗಿ “ಶ್ರೀಮನ್ ಮಹಾಚಂಡಿಕಾ ಯಾಗ”ವನ್ನು ನಡೆಸಲಾಯಿತು.
ಮದ್ಯಾಹ್ನ ಹೊರನಾಡಿನ ಧರ್ಮಕರ್ತ ಜಿ.ಭೀಮೆಶ್ವರ ಜೋಷಿ ದಂಪತಿಗಳು ಯಾಗದ ಪೂರ್ಣಾಹುತಿಯನ್ನು ನಡೆಸಿಕೊಟ್ಟರು.
ಈ ಹಿಂದೆಯೂ ಕೃಷಿಗೆ, ಕೃಷಿ ಬೆಳೆಗೆ ತೊಂದರೆ ಬಂದಾಗ ಕೃಷಿಕರು ಪರಿಹಾರವನ್ನು ನೀಡಬೇಕಾಗಿ ಪ್ರಾರ್ಥಿಸಿದ ಮೇರೆಗೆ ಶ್ರೀಮಾತೆಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ, ಪೂಜೆ, ಜಪ, ಹೋಮವನ್ನು ನಡೆಸಿ, ಶ್ರೀಮಾತೆಯ ಪ್ರಸಾದವನ್ನು ಅಪೇಕ್ಷಿತ ಎಲ್ಲಾ ಭಕ್ತರು ಪಡೆದುಕೊಂಡು ತಮ್ಮ ಕೃಷಿ ಕ್ಷೇತ್ರಕ್ಕೆ ಹಾಕಿ ಸಂರಕ್ಷಿಸಿಕೊಂಡು ಬರಲಾಗುತ್ತಿತ್ತು.
ಈ ಬಾರಿ ಅಡಿಕೆ ಮರಕ್ಕೆ ಎಲೆಚುಕ್ಕಿ ರೋಗ ಬಂದಿರುವ ಹಿನ್ನೆಲೆಯಲ್ಲಿ ಕೃಷಿಕರು ಹೊರನಾಡು ಧರ್ಮಕರ್ತ ಜಿ.ಭೀಮೇಶ್ವರ ಜೋಷಿಯವರಲ್ಲಿ ನಿವೇದನೆ ಮಾಡಿಕೊಂಡ ಹಿನ್ನಲೆಯಲ್ಲಿ ಅಡಿಕೆ ಬೆಳೆಗಾರರ ಹಿತವನ್ನು ಬಯಸಿ ಈ ಮಹಾ ಚಂಡಿಕಾ ಯಾಗವನ್ನು ನಡೆಸಲಾಯಿತು.
ಈ ಯಾಗಕ್ಕೆ ಕಳಸ ತಾಲ್ಲೂಕಿನ ವಿವಿದೆಡೆಯಿಂದ ನೂರಾರು ಕೃಷಿಕರ ಆಗಮಸಿ ಶ್ರೀಮಾತೆಗೆ ನಡೆಸಿದ ಹೋಮದ ಪ್ರಸಾದ ಮತ್ತು ಅರ್ಚನಾ ಪ್ರಸಾದವನ್ನು ಸ್ವೀಕರಿಸಿ, ನಂತರ ತಮ್ಮ ಕೃಷಿ ಭೂಮಿಗೆ ಹಾಕಲು ಪ್ರಸಾದವನ್ನು ತೆಗೆದುಕೊಂಡು ನಮ್ಮ ಕೃಷಿ ಭೂಮಿಯನ್ನು ರಕ್ಷಿಸಿ ಕಾಪಾಡಬೇಕು ಎಂದು ಪ್ರಾರ್ಥಿಸಿಕೊಂಡರು.