ಕಳಸ ಲೈವ್ ವರದಿ
ಕಳಸ ತಾಲ್ಲೂಕಿನಾಧ್ಯಂತ ವ್ಯಾಪಕವಾಗಿ ಹರಡಿಕೊಂಡಿರುವ ಅಡಿಕೆ ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸಲು ತೋಟಗಾರಿಕಾ ಇಲಾಖೆಯಿಂದ ಉಚಿತ ಔಷಧಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರತಿ ರೈತರಿಗೆ ಗರಿಷ್ಠ 1.00 ಎಕರೆವರೆಗೆ ಅನುದಾನದ ಲಭ್ಯತೆಯ ಆಧಾರದ ಮೇಲೆ ಔಷಧಿಯನ್ನು ರೈತ ಸಂಪರ್ಕ ಕೇಂದ್ರ ಕಳಸ ಇಲ್ಲಿ ವಿತರಿಸಲಾಗುತ್ತದೆ. ಅರ್ಜಿಯನ್ನು ದಿನಾಂಕ 31-10-2022 ರಿಂದ 04-11-2022 ರ ಒಳಗೆ ಸಲ್ಲಿಸುವುದು.
ಸಲ್ಲಿಸಬೇಕಾದ ದಾಖಲಾತಿಗಳು:
ಅರ್ಜಿ ನಮೂನೆ ಕಛೇರಿಯಲ್ಲಿ ನೀಡಲಾಗುವುದು, ಅಡಿಕೆ ತೋಟದ ಪಹಣಿ, ಆಧಾರ್ ಕಾರ್ಡ್ ಪ್ರತಿ, ಪರಿಶಿಷ್ಠ ಜಾತಿ/ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಲು ಕೋರಿದೆ.