ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಕಾರಕ್ಕಿ ಭದ್ರಾ ನದಿಯಲ್ಲಿ ಇದ್ದ ಅಪರಿಚಿತ ಗಂಡಸಿನ ಶವವನ್ನು ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಸದಸ್ಯ ಸುದರ್ಶನ್ ಮರಸಣಿಗೆ ಹಾಗೂ ಬಣಕಲ್ ವಲಯದ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಆರಿಫ್, ಅಂಬುಲೆನ್ಸ್ ಚಾಲಕ ಶರೀಫ್ ನದಿಯಿಂದ ಹೊತ್ತು ತಂದರು.
ಸುಮಾರು ನಾಲ್ಕೈದು ದಿನಗಳ ಹಿಂದೆಯೇ ನದಿಯಲ್ಲಿ ಮೃತ ಪಟ್ಟಿರಬಹುದು ಎಂದು ಅಂದಾಜಿಸಲಾಗಿದ್ದ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಇತ್ತು. ಕೊಳೆತು ವಾಸನೆ ಬರುತ್ತಿದ್ದ ಮೃತ ದೇಹವನ್ನು ಪ್ಲಾಸ್ಟಿಕ್ ಮೂಲಕ ಸುತ್ತಿ ನದಿಯಿಂದ ಆಂಬುಲೆನ್ಸ್ಗೆ ತಲೆ ಮೇಲೆ ಹೊತ್ತುಕೊಂಡು ಬಂದರು.
ನಂತರ ಆರಿಫ್ ಅವರು ಚಿಕ್ಕಮಗಳೂರು ಶವಗಾರಕ್ಕೆ ತೆಗೆದುಕೊಂಡು ಹೋಗುವ ಕಾರ್ಯ ಮಾಡಿದರು.
ಈ ಸಂದರ್ಭದಲ್ಲಿ ಕಳಸ ಪಿಎಸೈ ಹರ್ಷವರ್ಧನ್ ,ಹಿರೇಬೈಲ್ ಆಂಬುಲೆನ್ಸ್ ಚಾಲಕ ಶರೀಫ್, ಪೊಲೀಸ್ ಸಿಬ್ಬಂದಿಗಳು ಹಾಗೂ ಸ್ಥಳೀಯರು ಇದ್ದರು.