ಕಳಸ ಲೈವ್ ವರದಿ
ಕಳಸ ಅನ್ನಪೂರ್ಣೆಶ್ವರಿ ಮಹಿಳಾ ಮಂಡಳಿಯಿಂದ ಶನಿವಾರ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಪ್ರಯುಕ್ತ ವೃದ್ದ ಹಿರಿಯ ಮಹಿಳೆಯರಿಗೆ ವಸ್ತ್ರ ವಿತರಣಾ ಸಮಾರಂಭ ನಡೆಯಿತು.
ಮಾಜಿ ಜಿ.ಪಂ ಸದಸ್ಯ ಕೆ.ಆರ್ ಪ್ರಭಾಕರ್ ಮತ್ತು ಮಾಜಿ ತಾ.ಪಂ ಅಧ್ಯಕ್ಷ ಎಂ.ಎ.ಶೇಷಗಿರಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ವೃದ್ದ ಹಿರಿಯ ಮಹಿಳೆಯರಿಗೆ ವಸ್ತ್ರ ವಿತರಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಮಹಿಳಾ ಮಂಡಳಿ 38 ವರ್ಷಗಳಿಂದ ಮಾಡುತ್ತಿರುವ ಕಾರ್ಯ ವೈಖ್ಯರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ 150 ವೃದ್ದ ಮಹಿಳೆಯರಿಗೆ ಮಂಡಳಿ ವತಿಯಿಂದ ಸೀರೆ ಹಂಚಲಾಯಿತು. ನಂತರ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಶೊಭಾ ದೇಸಾಯಿ, ಮಾಜಿ ಅಧ್ಯಕ್ಷೆ ಶ್ರೀಮತಿ ಚಂಪಾ ಎಂ ರಾವ್, ಶ್ರೀಮತಿ ಪಾತಿಮಾ ರೆಹಮಾನ್, ಶ್ರೀಮತಿ ರಶ್ಮೀ ಹರ್ಷ, ಶ್ರೀಮತಿ ಸುಜಯ ಸದಾನಂದ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಇದ್ದರು.