ಕಳಸ ಲೈವ್ ವರದಿ
ಸಮಾಜ ಚಿಂತಕ ಹಿರಿಯ ಚೇತನ ಮೂಡಿಗೆರೆ ದುಂಡುಗ ಗ್ರಾಮದ ಡಿ.ಬಿ.ಸುಬ್ಬೇಗೌಡರು(92) ಶನಿವಾರ ನಿಧನರಾಗಿದ್ದಾರೆ.
ಇವರಿಗೆ ಸಂತಾಪ ವ್ಯಕ್ತಪಡಿಸಿದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ, ಸುಬ್ಬೇಗೌಡರು ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷರಾಗಿ, ಕಾಫಿ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ, ಕೋಮರ್ಕಿನ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿ, ನ್ಯಾಯ ತಂದು ಕೊಡುವಲ್ಲಿ ಅವರ ಶ್ರಮವಿದೆ. ಕೃಷಿಕರಾಗಿ, ಧಾರ್ಮಿಕವಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಉತ್ತಮ ವ್ಯಕ್ತಿತ್ವವನ್ನು ಹೊಂದಿದ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು.
ಶ್ರೀ ಮಾತೆಯ ಪರಮ ಭಕ್ತರು. ಎಲ್ಲರ ಪ್ರೀತಿ ಗೌರವ ವಿಶ್ವಾಸವನ್ನು ಗಳಿಸಿಕೊಂಡಿರುವ ಧೀಮಂತ ವ್ಯಕ್ತಿತ್ವ. ಅವರ ಮರಣ ತುಂಬಲಾರದ ನಷ್ಟವನ್ನು ಉಂಟುಮಾಡಿದೆ..
ಅಗಲಿದ ಚೇತನಕ್ಕೆ ಚಿರ ಶಾಂತಿಯನ್ನು ಹಾಗೂ ಕುಟುಂಬಕ್ಕೆ ದುಃಖವನ್ನು ಸೈಹಿಸುವ ಶಕ್ತಿಯನ್ನು ಶ್ರೀ ಮಾತೇ ಕರುಣಿಸಲಿ ಎಂಬುದಾಗಿ ಪ್ರಾರ್ಥಿಸುತ್ತೇವೆ ಎಂದಿದ್ದಾರೆ.
Related Stories
September 6, 2024