ಕಳಸ ಲೈವ್ ವರದಿ
ಇದೇ 25ರಂದು ಖಂಡಗ್ರಾಸ ಸೂರ್ಯಗ್ರಹಣ ಸಂಜೆ 5.08ರಿಂದ 6.29ರವರೆಗೆ ನಡೆಯಲಿದ್ದು ಹೊರನಾಡು ಅನ್ನಪೂಣೇಶ್ವರಿ ದೇಗುಲ ಮತ್ತು ಕಳಸ ಕಲಶೇಶ್ವರ ದೇವಸ್ಥಾನದಲ್ಲಿ ಆ ದಿನದ ಪ್ರಸಾದ ಭೋಜನ ಮತ್ತು ಪೂಜೆಯಲ್ಲಿ ಕೆಲ ಬದಲಾವಣೆ ಇರಲಿದೆ .
ಹೊರನಾಡಿನಲ್ಲಿ ಗ್ರಹಣ ಸ್ಪರ್ಶ ಕಾಲದಿಂದ ಗ್ರಹಣ ಮೋಕ್ಷ ಕಾಲದವರೆಗೆ ದೇವಿಗೆ ನಿರಂತರ ಅಭಿμÉೀಕ ನೆರವೇರುತ್ತದೆ. ಮಧ್ಯಾಹ್ನ 11ರಿಂದ 12ರವರೆಗೆ ಮಾತ್ರ ಪ್ರಸಾದ ಭೋಜನ ಇರುತ್ತದೆ. ಮಧ್ಯಾಹ್ನ ಮಹಾಮಂಗಳಾರತಿ 1.30ಕ್ಕೆ ನಡೆಯಲಿದೆ. ಎಂದಿನಂತೆ ದೇವಿಯ ದರ್ಶನ ಮತ್ತು ಅರ್ಚನೆ ಸಂಜೆ 4 ಗಂಟೆವರೆಗೆ ಇರಲಿದೆ.
ಗ್ರಹಣ ಮುಗಿದು ಶುದ್ಧಿ ಕಾರ್ಯ ನಡೆದ ನಂತರ ಎಂದಿನಂತೆ ಪೂಜೆ ಮತ್ತು ಸಂಜೆ ಪ್ರಸಾದ ಭೋಜನ ಇರುತ್ತದೆ. ಭಕ್ತರು ಈ ಬದಲಾವಣೆ ಗಮನಿಸಬೇಕು ಎಂದು ದೇವಸ್ಥಾನದ ಧರ್ಮಕರ್ತರದ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಕಲಶೇಶ್ವರ ದೇವಸ್ಥಾನದಲ್ಲಿ ಗ್ರಹಣ ಸ್ಪರ್ಶ ಕಾಲದಿಂದ ಗ್ರಹಣ ಮೋಕ್ಷ ಕಾಲದವರೆಗೆ ನಿರಂತರ ರುದ್ರಾಭಿಷೇಕ ನೆರವೇರುತ್ತದೆ. ಮಧ್ಯಾಹ್ನದ ಭೋಜನ ಇರುವುದಿಲ್ಲ. ಅಭಿಷೇಕಾಧಿ ಸೇವೆಗಳು ಇರಲಿದೆ. ಗ್ರಹಣ ಮುಗಿದು ಶುದ್ಧಿ ಕಾರ್ಯ ನಡೆದ ನಂತರ ಎಂದಿನಂತೆ ಪೂಜೆ ಪ್ರಸಾದ ವಿತರಣೆ ಇರುತ್ತದೆ.