ಕಳಸ ಲೈವ್ ವರದಿ
ಕಳಸ ತಲೂಕಿನ ಬಾಳೆಹೊಳೆಯ ಹೆರಟೆ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಕಾಳಿಂಗ ಸರ್ಪವನ್ನು ಕಳಸದ ರಿಜ್ಚಾನ್ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಹೆರಟೆ ಸೀತಾರಾಮ ಆಚಾರ್ಯ ಇವರ ಮನೆಯ ಹತ್ತಿರ ಕಾಣಿಸಿಕೊಂಡಿತ್ತು. ಇವರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದರು. ಸ್ಥಳಕ್ಕೆ ಕಳಸ ಅರಣ್ಯ ಇಲಾಖೆಯ ನಂದನ್ ಮತ್ತು ಓಂ ಪ್ರಕಾಶ್ ಬೇಟಿ ನೀಡಿ ನಂತರ ರಿಜ್ವಾನ್ ಅವರವನ್ನು ಕರೆಸಿ ಹಾವನ್ನು ಹಿಡಿದು ಕಾಡಿಗೆ ಬಿಡಲಾಗಿದೆ.