ಕಳಸ ಲೈವ್ ವರದಿ
ಸಂಸೆ ಅರ್ಚಿತ್ ಜೈನ್ ಅವರ ಮೊದಲ “ಭಾವನೆಗಳ ಬಯಲಿನಲ್ಲಿ” ಎಂಬ ಕವನ ಸಂಕಲನ ಮೂಡಬಿದ್ರೆಯ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಭಾರತೀಯ ಜೈನ್ ಮಿಲನ್ ವಲಯ 8ರ 19ನೇ ವಲಯ ಸಮ್ಮೇಳನದಲ್ಲಿ ಲೋಕಾರ್ಪಣೆ ಗೊಂಡಿತು.
ಈ ಹಿಂದೆ ಕಳಸ ಜೆಇಎಂ ಶಾಲೆಯ ವಿದ್ಯಾರ್ಥಿಯಾಗಿದ್ದ ಅರ್ಚಿತ್ ಜೈನ್ ಪದವಿಪೂರ್ವ ಶಿಕ್ಷಣವನ್ನು ಎಕ್ಸಲೆಂಟ್ ಕಾಲೇಜಿನಲ್ಲಿ ಮುಗಿಸಿದ್ದರು.ವಿದ್ಯಾರ್ಥಿ ದೆಸೆಯಿಂದಲೇ ಭರವಣಿಗೆಯಲ್ಲಿ ಆಸಕ್ತಿ ಹೊಂದಿದ್ದ ಅರ್ಚಿತ್ ತನ್ನ ಸುತ್ತಮುತ್ತಲಿನ ಪರಿಸರ, ಗೆಳೆತನ ಹಾಗೂ ಕನ್ನಡ ನಾಡುನುಡಿಯ ಬಗ್ಗೆ ಕವನ ಸಂಕಲನದಲ್ಲಿ ಬೆಳಕು ಚೆಲ್ಲಿದ್ದಾರೆ.
ಕವನ ಸಂಕಲನ ಬಿಡುಗಡೆಯ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಸುರೇಂದ್ರ ಹೆಗ್ಗಡೆ, ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್ ಉದ್ಯಮಿ ಪುಷ್ಪರಾಜ್ ಜೈನ್ ಇತರರು ಇದ್ದರು.