ಕಳಸ ಲೈವ್ ವರದಿ
ಕಳೆದ ಹದಿನೈದು ದಿನಗಳ ಹಿಂದೆ ಕಣ್ಮರೆಯಾಗಿದ್ದ ಎರಡು ಕಾಡಾನೆಗಳು ಶನಿವಾರ ಬೆಳಗ್ಗಿನ ಜಾವ ಕಳಸ ತಾಲೂಕಿನಲ್ಲಿ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಜಾಂಬಳೆ ಪ್ರದೇಶದಲ್ಲಿ ಕಾಣ ಕಂಡು ಬಂದಿದ್ದು, ರೈತರ ಮೊಗದಲ್ಲಿ ಮತ್ತೆ ಆತಂಕ ಸೃಷ್ಠಿಸಿದೆ.
ಹದಿನೈದು ದಿನಗಳ ಹಿಂದೆ ಕಳಸ ತಾಲ್ಲೂಕಿನ ಕೆಲವೆಡೆ ಎರಡು ಆನೆಗಳು ಸಂಚರಿಸಿ ಸಾಕಷ್ಟು ಪ್ರಮಾಣದ ಕೃಷಿ ಭೂಮಿಯನ್ನು ನಾಶ ಪಡಿಸಿ ನಂತರ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಡೆ ಮುಖ ಮಾಡಿದ್ದವು ಇದರಿಂದ ಕೃಷಿಕರು ನಿರಾಳರಾಗಿದ್ದರು.
ಕಳೆದ ಎರಡು ದಿನಗಳ ಹಿಂದೆಯಷ್ಟೆ ಅಭಯಾರಣ್ಯದ ವ್ಯಾಪ್ತಿಯ ಬಿಳಗಲ್, ಪ್ರದೇಶದಲ್ಲಿ ಕಂಡು ಬಂದ ಆನೆಗಳು ಶನಿವಾರ ಬೆಳಗ್ಗಿನ ಜಾವ ಜಾಂಬಳೆ ಬಿರೇಕಲ್ಮಕ್ಕಿ ಸುರೇಶ್ ಅವರ ತೋಟಕ್ಕೆ ನುಗ್ಗಿ ರಾತ್ರಿ ಯಿಡೀ ದಾಂದಲೆ ನಡೆಸಿದ ಆನೆಗಳು ಬಾಳೆ ಗಿಡಗಳನ್ನು ತಿಂದು, ಅಡಿಕೆ ಸಸಿಗಳನ್ನು ಮುರಿದು ಆನೆಗಳು ನಷ್ಟ ಮಾಡಿವೆ. ಆನೆ ಸಾಗಿದ ದಾರಿಯಲ್ಲಿ ಅಪಾರ ಕಾಫಿ ಗಿಡಗಳು ಕೂಡ ನಾಶವಾಗಿವೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ ತೋಟಕ್ಕೆ ಆದ ಹಾನಿಗೆ ಪರಿಹಾರ ನೀಡಬೇಕು ಎಂದು ಸುರೇಶ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.