ಕಳಸ ಲೈವ್ ವರದಿ
ಹಳುವಳ್ಳಿ-ಹೊರನಾಡು ರಸ್ತೆಯ ಮಾಗಲು ಎಂಬಲ್ಲಿ ಇಂದು ಮುಂಜಾನೆ ರಸ್ತೆ ಮಧ್ಯೆಯೇ ಕಂದಕ ನಿರ್ಮಾಣ ಆಗಿದೆ.
ಗುರುವಾರ ಸಂಜೆಯಿಂದ ಶುಕ್ರವಾರ ಬೆಳಿಗ್ಗೆ ವರೆಗೆ ಧಾರಾಕಾವಾಗಿ ಮಳೆ ಸುರಿದಿದ್ದು, ಸಂಜೆಯಿಂದ ಬೆಳಗ್ಗಿನವರೆಗೆ 5 ಇಂಚು ಮಳೆ ಸುರಿದಿದೆ ಇದರಿಂದ ರಸ್ತೆಯ ಮಧ್ಯೆ ಕಂದಕ ನಿರ್ಮಾಣವಾಗಿದ್ದಲ್ಲದೆ ರಸ್ತೆ ಬದಿಯ ಗುಡ್ಡದ ಮಣ್ಣು ಕುಸಿದು ರಸ್ತೆಗೆ ಹಾನಿ ಆಗಿದೆ.
ರಸ್ತೆ ಮಧ್ಯೆ ಉಂಟಾದ ಕಂದಕದಿಂದ ರಸ್ತೆಯಲ್ಲಿ ಸಾಗುವ ವಾಹನಗಳಿಗೆ ತೊಂದರೆ ಉಂಟಾಗಿದೆ. ಈ ರಸ್ತೆಯ ಮುಖಾಂತರ ಹೊರನಾಡು ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ತೆರಳುವ ಹಿನ್ನಲೆಯಲ್ಲಿ ರಸ್ತೆಯಲ್ಲಿ ಉಂಟಾದ ಕಂದಕದಿಂದ ತೀವ್ರ ತೊಂದರೆ ಉಂಟಾಗಿದೆ. ಸ್ವಲ್ಪ ಯಾಮಾರಿದರೂ ಕಂದಕಕ್ಕೆ ಬೀಳುವ ಅಪಾಯವಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಕೂಡಲೇ ಗಮನ ಹರಿಸಿ ತುರ್ತು ಕೆಲಸ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.