ಕಳಸ ಲೈವ್ ವರದಿ
ಕಳೆದ ಏಳೆಂಟು ವರ್ಷಗಳಿಂದ ಹಿರೇಬೈಲು ಪಟ್ಟಣದಲ್ಲಿ ಸಂಚರಿಸುತ್ತಾ ಎಲ್ಲರಿಗೂ ಪ್ರೀತಿ ಪಾತ್ರವಾಗಿದ್ದ ಕೆಂಪ ಎಂಬ ಹೆಸರಿನ ಎತ್ತು ಅಸೌಖ್ಯದಿಂದ ಭಾನುವಾರ ಪ್ರಾಣ ಬಿಟ್ಟಿದೆ.
ಹಿರೇಬೈಲು ಪಟ್ಟಣದಲ್ಲಿ ಪ್ರತಿ ನಿತ್ಯ ಅಂಗಡಿ ಮನೆ ಬಾಗಿಲಿಗೆ ಬರುತ್ತಿದ್ದ ಕೆಂಪನಿಗೆ ಜನ ಮನೆಯಲ್ಲಿ ಉಳಿದ ಆಹಾರ, ಅಂಗಡಿಗಳಲ್ಲಿ ಬಾಳೆಹಣ್ಣು, ಬ್ರೆಡ್ ಇನ್ನಿತರೆ ಆಹಾರವನ್ನು ನೀಡುತ್ತಿದ್ದರು. ಎಲ್ಲಷ್ಟೂ ಯಾರಿಗೂ ತೊಂದರೆ ನೀಡದೆ ಜನ ಕೊಡುತ್ತಿದ್ದ ಆಹಾರವನ್ನು ತಿಂದು ತಲೆಯಲ್ಲಾಡಿಸಿ ಹೋಗುತ್ತಿದ್ದ ಮೂಕ ಪ್ರಾಣಿ ಕೆಂಪನ ಪ್ರೀತಿಗೆ ಜನ ಸೋತು ಹೋಗಿದ್ದರು. ಜನ ಕೂಡ ಅಂಗಡಿ ಬಾಗಿಲಿಗೆ ಬಂದ ಕೆಂಪನ ಬೆನ್ನು ಸವರಿ ಮುದ್ದಿಸಿ ಕಳುಸಿತ್ತಿದ್ದರು.
ಆದರೆ ಭಾನುವಾರ ಕೆಂಪ ಅಸೌಖ್ಯದಿಂದ ಪ್ರಾಣ ಬಿಟ್ಟಿದೆ. ಕೆಂಪನಿಗೆ ಹುಷಾರಿಲ್ಲ ಎಂದಾದ ಕೂಡಲೇ ವಿವಿಧ ರೀತಿಯ ಚಿಕಿತ್ಸೆಯನ್ನು ಮಾಡಿದರಾದರೂ ಕೆಂಪ ಬದುಕುಳಿಯಲಿಲ್ಲ.
ಕೆಂಪ ಪ್ರಾಣ ಬಿಟ್ಟ ಸುದ್ದಿ ತಿಳಿದ ಗ್ರಾಮಸ್ಥರು ಕಂಬನಿ ಸುರಿಸಿದ್ದಾರೆ. ಮೃತ ದೇಹಕ್ಕೆ ಬಿಳಿ ಬಟ್ಟೆ , ಹೂ ಹಾಕಿ, ಪೂಜೆ ಮಾಡಿದ ನಂತರ ಕೆಂಪನ ಅಂತ್ಯ ಸಂಸ್ಕಾರವನ್ನು ಗ್ರಾಮಸ್ಥರು ಮಾಡಿದ್ದಾರೆ.