ಕಳಸ ಲೈವ್ ವರದಿ
ಒಂದು ಸಂಸಾರದ ಆಧಾರ ಸ್ತಂಭವಾಗಿದ್ದ ಹಿರೇಬೈಲ್ ಕೋರೆ ಗ್ರಾಮದ ಜ್ಯೋತಿ ಕುಮಾರ್ ಅವರ ಎರಡೂ ಮೂತ್ರಪಿಂಡಗಳು ನಿಷ್ಕ್ರಿಯಗೊಂಡಿದ್ದು ಇವರನ್ನೆ ನಂಬಿಕೊಂಡಿದ್ದ ಕುಟುಂಬಕ್ಕೀಗ ದಿಕ್ಕೇ ತೋಚದಂತಾಗಿದೆ.
ವೃತ್ತಿಯಲ್ಲಿ ಚಾಲಕರಾಗಿರುವ ಜ್ಯೋತಿ ಕುಮಾರ್ ಅವರಿಗೆ ತಿಂಗಳ ಹಿಂದೆ ಎರಡು ಕಾಲುಗಳು ಊದ ತೊಡಗಿದ್ದು ಕಾರ್ಕಳ ಹಾಗೂ ಮಡಿಕೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಕೂಡ ಕಾಲು ಊದುವುದು ಕಡಿಮೆಯಾಗಲಿಲ್ಲ.
ಮಂಗಳೂರಿನ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದ್ದು ಈ ಸಂದರ್ಭದಲ್ಲಿ ವೈದ್ಯರು ಜ್ಯೋತಿ ಕುಮಾರ್ ಅವರ ಎರಡು ಮೂತ್ರಪಿಂಡಗಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಜ್ಯೋತಿ ಕುಮಾರ್ ಹಾಗೂ ಅವರ ಕುಟುಂಬ ಆಘಾತಕ್ಕೆ ಒಳಗಾಗಿದ್ದಾರೆ.
ಪ್ರಸ್ತುತ ಡಯಾಲೀಸಿಸ್ ಮಾಡಲಾಗುತ್ತಿದ್ದು ಜ್ಯೋತಿ ಕುಮಾರ್ ಅವರ ಮೂತ್ರಪಿಂಡವನ್ನು ಬದಲಾಯಿಸಬೇಕು ಅಥವಾ ಜೀವನ ಪಯರ್ಂತ ಡಯಾಲಿಸೀಸ್ ಮಾಡಿಸುತ್ತಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಮೂತ್ರಪಿಂಡ ನೀಡಲು ಜ್ಯೋತಿಕುಮಾರ್ ಕುಟುಂಬದ ಸದಸ್ಯರು ಮುಂದೆ ಬಂದಿದ್ದು ಮೂತ್ರಪಿಂಡ ಬದಲಾವಣೆ ಮಾಡಲು ಸುಮಾರು 10 ಲಕ್ಷ ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಜ್ಯೋತಿ ಕುಮಾರ್ ಚಾಲಕರಾಗಿದ್ದು ಜ್ಯೋತಿ ಕುಮಾರ್ ಅವರ ಪತ್ನಿ ಕೂಲಿ ಕೆಲಸ ಮಾಡುತ್ತಾರೆ. ಇವರಿಬ್ಬರ ದುಡಿಮೆಯಿಂದ ಬದುಕು ಸಾಗುತ್ತಿದ್ದು ಜ್ಯೋತಿ ಕುಮಾರ್ ಅವರು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವುದು ಈ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.
ಈ ಕುಟುಂಬ ಜ್ಯೋತಿಕುಮಾರ್ ಅವರ ಚಿಕಿತ್ಸೆಗೆ ನೆರವಿನ ನಿರೀಕ್ಷೆಯಲ್ಲಿದ್ದು ನೆರವು ನೀಡುವವರು ಜ್ಯೋತಿಕುಮಾರ್ ಗೂಗಲ್ ಪೇ ಸಂಖ್ಯೆ 9483076692 ಮೂಲಕ ದೇಣಿಗೆ ಪಾವತಿ ಮಾಡಬಹುದು.