ಕಳಸ ಲೈವ್ ವರದಿ
ಕಳಸ ಬಿಜೆಪಿ ಯುವ ಮೋರ್ಚಾದಿಂದ ಹೊರನಾಡು ರಸ್ತೆಯ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಿದರು.
ಹೊರನಾಡು ಗ್ರಾಮ ಪಂಚಾಯಿತಿ ಬಳಿಯಿಂದ ಪ್ರಾರಂಭಗೊಂಡ ಸ್ವಚ್ಚತಾ ಕಾರ್ಯಕ್ರಮದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಇನ್ನಿತರೆ ತ್ಯಾಜಗಳನ್ನು ಸಂಗ್ರಹಿಸಿ ಕಸದ ಲಾರಿಯಲ್ಲಿ ತುಂಬಿ ವಿಲೇವಾರಿ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ಕೆ.ಮಹೇಶ್, ಕಳಸ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ನಾಗಭೂಷನ್,ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ, ಹೊರನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ವೃಷಭರಾಜ್, ಮೂಡಿಗೆರೆ ತಾಲ್ಲೂಕು ಎಸ್.ಟಿ ಮೋರ್ಚಾ ಅಧ್ಯಕ್ಷ ಮೋಹನ್,ಮುಖಂಡರಾದ ಸನ್ಮತಿ, ನಾಗೇಶ್ ಭಟ್, ಉದಯ, ಸತೀಶ, ಪ್ರಶಾಂತ್, ಪ್ರಸಿದ್ಧ ಜೈನ್, ಅಜಿತ್ ಕುಳಾಲ್, ಅಚಿಜನ್ ಕುಮಾರ್, ವಿಜಯ್, ಕುಮಾರ್, ಪಿಡಿಒ ಅರುಣ್ ಕುಮಾರ್ ಇದ್ದರು.