ಕಳಸ ಲೈವ್ ವರದಿ
ಬಾಳೆಹೊಳೆಯ ಕಗ್ಗನಳ್ಳ ಸಮೀಪ ಭದ್ರಾನದಿಯಲ್ಲಿ ಮೀನು ಹಿಡಿಯಲು ಹೋಗಿ ನೀರು ಪಾಲಾಗಿದ್ದ ಯುವಕನ ಶವ ಗುರುವಾರ ಸಂಜೆ ಪತ್ತೆಯಾಗಿದೆ.
ಶಿವಮೊಗ್ಗದ ವಿದ್ಯಾನಗರ ಹರೀಶ(24) ಇನ್ನಿಬ್ಬರ ಜೊತೆ ಮೀನು ಹಿಡಿಯಲು ಗುರುವಾರ ಬೆಳಿಗ್ಗೆ ಬಂದಿದ್ದಾರೆ, ಇಲ್ಲಿ ಗಾಳ ಹಾಕಿದ್ದ ಸಂದರ್ಭದಲ್ಲಿ ಗಾಳ ಸಿಕ್ಕಿ ಹಾಕಿಕೊಂಡಿತ್ತು.ಇದನ್ನು ತೆಗೆಯಲೆಂದು ನೀರಿಗಿಳಿದಿದ್ದ ಹರೀಶ ನೀರು ಪಾಲಾಗಿದ್ದ ಎನ್ನಲಾಗಿದೆ.
ಬೆಳಿಗ್ಗೆಯಿಂದ ಶವಕ್ಕಾಗಿ ಶೌರ್ಯ ತಂಡ ಹುಡುಕಾಟ ನಡೆಸಿತ್ತು.ಸಂಜೆಯ ಹೊತ್ತಿಗೆ ಮಲ್ಪೆಯ ಮುಳುಗು ತಜ್ಞ ಈಶ್ವರ್ ಶವ ಪತ್ತೆ ಮಾಡಿದರು.
ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ