ಕಳಸ ಲೈವ್ ವರದಿ
ರೈತರು ಅತಿಯಾದ ರಾಸಾಯನಿಕವನ್ನು ಬಳಸುತ್ತಿರುವುದರಿಂದಾಗಿ ಅಡಕೆ ಮರಕ್ಕೆ ಕಾಯಿಲೆಗಳು ಬರುತ್ತಿತ್ತು ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ನಿಗದಿ ಮಾಡಿದ ಪ್ರಮಾಣದಲ್ಲಿ ರಸ ಗೊಬ್ಬರಗಳನ್ನು ನೀಡಿದಲ್ಲಿ ಕೃಷಿಯಲ್ಲಿ ಹೆಚ್ಚು ಇಳುವರಿಯನ್ನು ಮತ್ತು ರೋಗದ ತಡೆಯನ್ನು ಮಾಡಲು ಸಾಧ್ಯವಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ರೋಗ ಮತ್ತು ಕೀಟ ನಿಯಂತ್ರಣ ವಿಭಾಗದ ವಿಜ್ಞಾನಿಯಾಗಿರುವ ಡಾಕ್ಟರ್ ಗಿರೀಶ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬುಧವಾರ ಕೃಷಿ ವಿಜ್ಞಾನ ಕೇಂದ್ರ ಮೂಡಿಗೆರೆ ಹಾಗೂ ತೋಟಗಾರಿಕೆ ಇಲಾಖೆ ಮೂಡಿಗೆರೆ ಹಾಗೂ ಕೃಷಿ ಇಲಾಖೆ ಕಳಸ ತೋಟಗಾರಿಕೆ ಇಲಾಖೆ ಕಳಸ ಇವರ ಸಹಯೋಗದೊಂದಿಗೆ ಹೇರಡಿಕೆಯ ತೋಟದಲ್ಲಿ ಅಡಿಕೆಗೆ ಬಂದಿರುವಂತಹ ಮಾರಣಾಂತಿಕ ರೋಗದ ಬಗ್ಗೆ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು ನಿಗದಿ ಮಾಡಿದ ಪ್ರಮಾಣಕ್ಕಿಂತ ಹೆಚ್ಚು ರಾಸಾಯನಿಕ ಬಳಸುತ್ತಿರುವುದರಿಂದಾಗಿ ಎಲೆಚುಕ್ಕಿ ರೋಗ, ಹರಳು ಉದುರುವಿಕೆ, ಅಡಿಕೆ ಕಾಯಿ ಉದುರುವಿಕೆ ಆಗುತ್ತಿದೆ ಇಲಾಖೆ ಮಾಹಿತಿಯನ್ನು ಸರಿಯಾಗಿ ಪಡೆದು ಕೃಷಿ ಮಾಡುವಂತೆ ರವರು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಜಯ ಸದಾನಂದ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ರೈತರ ಬಗ್ಗೆ ಅಪಾರವಾದ ಕಾಳಜಿ ಇದ್ದು ರೈತರಿಗೆ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದ್ದು ತುಂಬಾ ಉಪಾಕರಿಯಾಗಿದೆ ಇಂತಹ ತರಬೇತಿ ಎಲ್ಲ ಕಡೆಯೂ ಆಗಬೇಕು ಎಂದು ಹೇಳಿದರು.
ಮೂಡಿಗೆರೆ ತೋಟಗಾರಿಕೆ ನಿರ್ದೇಶಕರಾದ ಜಯದೇವ್ ,ಹೇರಡಿಕೆ ಒಕ್ಕೂಟದ ಅಧ್ಯಕ್ಷರಾದ ಗಜೇಂದ್ರ , ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕರಾದ ದಿನೇಶ್, ಮೇಲ್ವಿಚಾರಕರಾದ ಶಿವರಾಜ್ ಸೇವಾಪ್ರತಿನಿದಿ ಉμÁ, ಕಳಸ ತೋಟಗಾರಿಕಾ ಅಧಿಕಾರಿ ಚಂದ್ರಪ್ಪ ಇದ್ದರು.