ಕಳಸ ಲೈವ್ ವರದಿ
ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2021-22ನೇ ಸಾಲಿನಲ್ಲಿ 448.93 ಕೋಟಿ ವ್ಯವಹಾರ ನಡೆಸಿ 31.47 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಮಹಬಲೇಶ್ವರ ಮಾಹಿತಿ ನೀಡಿದರು.
ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಈಗ 3472 ಸದಸ್ಯರು ಇದ್ದು, ಸಂಘದ ಸದಸ್ಯರ ಷೇರು ಬಂಡವಾಳ 116.52 ಲಕ್ಷ ಇದ್ದು, ಅಪದ್ದನ 97.01 ಲಕ್ಷ ಮತ್ತು ಇತರೆ ನಿಧಿಗಳು 467.71 ಲಕ್ಷ ಇದೆ. ಸಂಘದಲ್ಲಿ ಉಳಿತಾಯ ಠೇವಣಿ, ಅವಧಿ ಠೇವಣಿ, ಆರ್.ಡಿ ಠೇವಣಿ, ಪಿಗ್ಮಿ ಠೇವಣಿ ಮತ್ತು ಅನ್ನಪೂರ್ಣ ನಗದು ಪತ್ರದ ಮುಖಾಂತರ ಒಟ್ಟು 4448.80 ಲಕ್ಷಗಳ ಠೇವಣಿಯನ್ನು ಹೊಂದಿರುತ್ತದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ಮಾತನಾಡಿ ಕಳಸದ ಕಚಗಾನೆಯಲ್ಲಿ ಸಂಘ ಖರೀದಿಸಿದ ಜಾಗದಲ್ಲಿ ಗೋದಾಮು ನಿರ್ಮಿಸಲಾಗುತ್ತಿದೆ ಮತ್ತು ಬೆಳೆದಂತ ಬೆಳೆಗಳ ಮೌಲ್ಯವರ್ಧನೆಗೊಳಿಸಿ ಮಾರಾಟ ಮಾಡುವ ವ್ಯವಸ್ಥೆ ಹಾಗೂ ಅಡಿಕೆ ಸುಲಿಯುವ ಯಂತ್ರ ಕಾಳು ಮೆಣಸು ಹಾಗೂ ಕಾಫಿ ಸಂಸ್ಕರಣೆ ಘಟಕಗಳನ್ನು ಇಲ್ಲಿ ಅಳವಡಿಸುವ ಬೃಹತ್ ಯೋಜನೆ ಕಾರ್ಯಪ್ರವೃತ್ತವಾಗಿದ್ದು, ಇನ್ನೆರಡು ತಿಂಗಳುಗಳಲ್ಲಿ ಆರಂಭವಾಗಲಿದೆ. ಅಡಿಕೆಗೆ ಹೊಸ ರೋಗಗಳು ಕಂಡು ಬಂದಿದ್ದರೂ ಅಡಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ನಿರ್ದಿಷ್ಟ ಔಷಧಿ ಅಥವಾ ಗೊಬ್ಬರದ ಬಳಕೆ ಬಗ್ಗೆ ಶಿಫಾರಸ್ಸು ಮಾಡಲು ವಿಫಲರಾಗಿದ್ದಾರೆ. ಸಹಕಾರಿ ಸಂಘಗಳಿಗೆ ರಸಗೊಬ್ಬರ ಪೂರೈಕೆಯಲ್ಲಿ ಬಹಳ ಅನ್ಯಾಯಾಗುತ್ತಿದೆ. ಖಾಸಾಗಿಯವರಿಗೆ ಸಿಗುವಷ್ಟು ಸಲೀಸಾಗಿ ನಮಗೆ ಗೊಬ್ಬರ ಸಿಗುತ್ತಿಲ್ಲ. ಇದರ ಹಿಂದೆ ದೊಡ್ಡ ಲಾಬಿ ಇದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಿಯುಸಿ ಮತ್ತು 10ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮತ್ತು ನೂತನಾಗಿ ಸಂಸೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಸಂಘದ ನಿರ್ದೇಶಕರಾದ ರವಿ ಕುಮಾರ್ ಮತ್ತು ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸಂಘದ ನಿರ್ದೇಶಕ ಅ.ರಾ.ಸತೀಶ್ಚಂದ್ರ ಇವರನ್ನು ಗೌರವಿಸಲಾಯಿತು.
ಉಪಾದ್ಯಕ್ಷೆ ಆಶಾಲತಾ ಜೈನ್,ನಿರ್ದೇಶಕರಾದ ,ರವಿ ಕುಮಾರ್, ಅನಿಲ್ ಗೆವೀನ್, ರಾಜೇಂದ್ರ.ಕೆ, ಹೆಚ್.ಟಿ. ಕೃಷ್ಣಪ್ಪ, ಕೃಷ್ಣಪ್ಪ ಕೆ.ಎಸ್ ,ಶಕುಂತಳ, ಅನುಸೂಯ ಎನ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪ್ರಯಾಗ್ ಇದ್ದರು.