ಕಳಸ: (ಕಳಸ ಲೈವ್ ವರದಿ)
ಡಾ|| ಬಿ.ಆರ್. ಅಂಬೇಡ್ಕರ್ ಇವರನ್ನು ಅವಹೇಳನಾಕಾರಿಯಾಗಿ ನಿಂದಿಸಿರುವ ಸಿರವಾಸೆಯ ರಮೇಶ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಳಸ ಇವರು ಕಳಸ ಪೊಲೀಸ್ ಠಾಣೆಯ ಪಿಎಸೈ ಹರ್ಷವರ್ಧನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ನಮ್ಮ ದೇಶದ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಇವರನ್ನು ಗೌರವಯುತವಾಗಿ ಕಾಣುವುದು ದೇಶದ ನಾಗರೀಕನ ಕರ್ತವ್ಯವಾಗಿದೆ. ಆದರೆ ಶಿರವಾಸೆಯ ರಮೇಶ ಎಂಬಾತನು ಡಾ|| ಬಿ.ಆರ್.ಅಂಬೇಡ್ಕರ್ ಇವರನ್ನು ಅವಹೇಳನಾರಿಯಾಗಿ ನಿಂದಿಸಿರುತ್ತಾರೆ ಮತ್ತು ಅಂಬೇಡ್ಕರ್ ಅವರಿಗೆ ನಿಂದಿಸಿದ ಮಾತುಗಳನ್ನು ಮೊಬೈಲ್ ನಲ್ಲಿ ರೆಕಾರ್ಡಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ದೇಶದ್ರೋಹ ಎಸಗಿದ್ದಾರೆ.
ಆದ್ದರಿಂದ ನಿಂದಿಸಿರುವ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿಯನ್ನು ನೀಡುವ ಸಂದರ್ಭದಲ್ಲಿ ಸಮತಿಯ ಅಧ್ಯಕ್ಷ ಸಂಜೀವ, ಸದಸ್ಯರಾದ ಅರುಣ್, ಶೋಭ, ಭಾಸ್ಕರ, ಸುಮನ್, ಶಿವು, ಗಿರೀಶ್ ಇದ್ದರು.