ಕಳಸ(ಕಳಸ ಲೈವ್ ವರದಿ)
ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾ ಕೇಂದ್ರ ಸಮಿತಿಯ 2021-22 ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಮಹಾಸಭೆಯು ಭಾನುವಾರ ಮುನ್ನೂರುಪಾಲಿನ ಶ್ರೀ ಮಹಾಗಣಪತಿ ಮತ್ತು ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಊರಿನ ಹಿರಿಯ ಕೃಷಿಕರಾದ ಶ್ರೀ ನಾಗೇಶ ರಾವ್ ಗಂಗನಕೊಡಿಗೆ ಇವರಿಗೆ ಗೌರವ ಸನ್ಮಾನ, ಹಿರಿಯ ಹೋಮಿಯೋಪತಿ ವೈದ್ಯರಾದ ಡಾ| ಜಿ.ಬಿ. ನಟರಾಜ್ ಇವರಿಗೆ ಅಭಿನಂದನೆ, ಉನ್ನತ ವ್ಯಾಸಂಗ ಮಾಡಿದಂತಹ ವಿ.ಆರ್ ಆಕಾಶ್ (ಸಿ.ಎ) ಮತ್ತು ಜಿ.ಮ್ ಮಂದಾರ (ಎಮ್.ಬಿ.ಬಿ.ಎಸ್) ಇವರಿಗೆ ಪ್ರತಿಭಾ ಪುರಸ್ಕಾರ, ವೇದಾಬ್ಯಾಸ ಮಾಡಿದಂತಹ ಎಂ.ಬಿ ಆದರ್ಶ ಮತ್ತು ಕೆ.ಆರ್ ರಕ್ಷಿತ್ ಇವರಿಗೆ ಅಭಿನಂದನೆ ಸಲ್ಲಿಸಿದರು.
ಶೃಂ.ಶಿ.ಮ.ಹೆ.ಬ್ರಾಹ್ಮಣ ಮಹಾಸಭಾ ಕಳಸ ಘಟಕದ ಮಹನೀಯರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.