ಕಳಸ: (ಕಳಸ ಲೈವ್ ವರದಿ)
ಕನ್ಯಾ ಸಂಕ್ರಮಣ ನಿಮಿತ್ತ ವಿಶ್ವಕರ್ಮ ಸಮಾಜ ಬಾಂಧವರಿಂದ ವಿಶ್ವಕರ್ಮ ಯಜ್ಞ ಹಾಗೂ ವಿಶ್ವಕರ್ಮ ಪೂಜೆಯನ್ನು ಶನಿವಾರ ನಡೆಸಲಾಯಿತು.
ವಿಶ್ವಕರ್ಮ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಹೆಚ್ಚು ಸಮಾಜದ ಬಾಂದವರು ಆಗಮಿಸಿದ್ದರು.
ಪ್ರಶಾಂತ್ ಪುರೋಹಿತ್ ಕೊಪ್ಪ ಇವರ ನೇತ್ರತ್ವದಲ್ಲಿ ಪೂಜೆಯು ನೆರವೇರಿತು.
ಸಮಾಜದ ಅಧ್ಯಕ್ಷ ಪಿ.ಎ.ಕುಮಾರಸ್ವಾಮಿ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ಸಂಘದ ಸರ್ವ ಸದಸ್ಯರು ಸಮಾಜ ಬಾಂಧವರು ಇದ್ದರು..