ಕಳಸ:(ಕಳಸ ಲೈವ್ ವರದಿ)
ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಹೊರನಾಡಿನಲ್ಲಿ ಸೆ 26 ರಿಂದ ಅ 07 ರವರೆಗೆ ಶರನ್ನವರಾತ್ರಾ ಮಹೋತ್ಸವ ಸಹಿತ ಶ್ರೀಮನ್ ಮಹಾಚಂಡಿಕಾ ಹೋಮ,ಪಟ್ಟಾಭಿಷೇಕೋತ್ಸವ ಜೀವ-ಭಾವ ಮತ್ತು ಶ್ರೀಮಾತಾ ಪ್ರಶಸ್ತಿ ಪ್ರದಾನ ನಡೆಯಲಿದೆ .
ಶರನ್ನವರಾತ್ರಿಯ ದಿನಗಳಲ್ಲಿ ಅನ್ನಪೂರ್ಣೇಶ್ವರಿಯು ವಿಶೇಷ ಪೂಜೆ, ಹೋಮಗಳು ನಡೆಯಲಿದ್ದು, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ಸೆ 26 ರಂದು ಹಂಸಾರೂಢಾ ಸರಸ್ವತೀ ಅಲಂಕಾರ ಪೂಜೆ, ಶ್ರೀ ಪಂಚದುರ್ಗಾ ಹೋಮ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಪಿ.ಶಶಿಧರ ಬೆಂಗಳೂರು ಇವರಿಂದ ಭಕ್ತಿಗೀತೆ, ಸಂಜೆ ಕೇಶವ ಪ್ರಸಾದ್ ಬೆಂಗಳೂರು ಇವರಿಂದ ಸ್ಯಾಕ್ಸೋಫೋನ್ ವಾದನ.
ಸೆ 27 ರಂದು ಗಜಾರೂಢಾ ಬ್ರಹ್ಮಚಾರಿಣೀ ಅಲಂಕಾರ ಪೂಜೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಲಕ್ಷ್ಮೀ ಮೂಲಮಂತ್ರ ಹೋಮ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಕು|| ಸುಪ್ರಿಯಾ ಜೋಷಿ ತಂಡದವರಿಂದ ಭಕ್ತಿ ಸಂಗೀತ, ಸಂಜೆ ಭವತಿ ನೃತ್ಯ ತಂಡ ಬೆಂಗಳೂರು ಇವರಿಂದ ಭರತ ನಾಟ್ಯ.
ಸೆ 28 ರಂದು ಸಿಂಹರೂಢಾ ಚಂದ್ರಘಂಟಾ ಅಲಂಕಾರ ಪೂಜೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಪುರುಷಸೂಕ್ತ ಹೋಮ, ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಸಂ|| ವಿ|| ಎಂ.ಬಿ.ಶಾಂತ ಕುಮಾರಿ ಮೈಸೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿಗೀತೆ, ಸಂಜೆ ಬಿ.ವಿಭಾ ದಿವಾಕರ್ ಮತ್ತು ತಂಡ ಬೆಂಗಳೂರು ಇವರಿಂದ ಭರತ ನಾಟ್ಯ.
ಸೆ 29 ರಂದು ಮೃಗಾರೂಢಾ ಕೂಷ್ಮಾಂಡ ಅಲಂಕಾರ ಪೂಜೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀಸೂಕ್ತ ಹೋಮ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಇಂಪನ ಸಾಂಸ್ಕøತಿಕ ಕಲಾವೃಂದ ಬೆಂಗಳೂರು ಇವರಿಂದ ಭಕ್ತಿ ಸಂಗೀತ, ಸಂಜೆ ಶ್ರೀ ದುರ್ಗಾ ನೃತ್ಯ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ಮೈಸೂರು ಇವರಿಂದ ಭರತ ನಾಟ್ಯ.
ಸೆ 30 ರಂದು ಮಕರಾರೂಢಾ ಸ್ಕಂದಮಾತಾ ಅಲಂಕಾರ ಪೂಜೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಲಲಿತಾ ಮೂಲಮಂತ್ರ ಹೋಮ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ
ಮಹೇಂದ್ರ ಘೋರೆ ಮತ್ತು ತಂಡ ಶಿವಮೊಗ್ಗ ಇವರಿಂದ ಸುಗಮ ಸಂಗೀತ, ಸಂಜೆ ಭರತಾಂಜಲಿ ನೃತ್ಯ ತಂಡ ಬೆಂಗಳೂರು ಇವರಿಂದ ಭರತ ನಾಟ್ಯ.
ಅ 1 ರಂದು ಮಯೂರಾರೂಢಾ ಕಾತ್ಯಾಯಿನೀ ಅಲಂಕಾರ ಪೂಜೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಸರಸ್ವತಿ ಮೂಲಮಂತ್ರ ಹೋಮ ಸಾಂಸ್ಕøತಿಕ ಕಾರ್ಯಕ್ರಮದ ಬೆಳಿಗ್ಗೆ ಜಿ.ಎಂ.ಸೌಮ್ಯ ಉಪಾಧ್ಯಾಯ ತಂಡದಿಂದ ದೇವರ ನಾಮ, ಸಂಜೆ ನೃತ್ಯ ವಿದ್ಯಾ ನಿಲಯ ಬೆಂಗಳೂರು ಇವರಿಂದ ಭರತ ನಾಟ್ಯ.
ಅ 2 ರಂದು ಅಶ್ವಾರೂಢಾ ಗೌರೀ ಅಲಂಕಾರ ಪೂಜೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಶ್ರೀ ವಾಗೀಶ್ವರೀ ಮೂಲಮಂತ್ರ ಹೋಮ ಮತ್ತು ಶಾರದಾ ಪೂಜೆ.ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಎಂ.ನಿಶಾಂತ್ ಬೆಂಗಳೂರು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಂಜೆ ಮಹಾಗಣಪತಿ ಆಟ್ರ್ಸ್ ಮತ್ತು ಕಲ್ಚರಲ್ ಪೌಂಡೇಷನ್ ಉಡುಪಿ ಇವರಿಂದ ಯಕ್ಷಗಾನ,
ಅ 03 ರಂದು ವೃಷಭಾರೂಢಾ ತ್ರಿಮೂರ್ತಿ ಅಲಂಕಾರ ಪೂಜೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ದುರ್ಗಾ ಮೂಲಮಂತ್ರ ಹೋಮ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ
ತೇಜಸ್ವಿನಿ ಚರನ್ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ, ಸಂಜೆ ಕು| ಮೇಘನಾ, ಕು| ಪ್ರಿಯಾಂಕ ರಾಮಚಂದ್ರಯ್ಯ ತಂಡ ಬೆಂಗಳೂರು ಇವರಿಂದ ಭರತ ನಾಟ್ಯ.
ಅ 04 ರಂದು ರಂದು ಸಿಂಹಾರೂಢಾ ಸಿಧ್ಧಿಧಾತ್ರೀ ಅಲಂಕಾರ ಪೂಜೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಚಂಡಿಕಾ ಮೂಲಮಂತ್ರ ಹೋಮ ಹಾಗೂ ಆಯುಧ ಪೂಜೆ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಚಿಂತಲಪಲ್ಲಿ ವಿ.ಶ್ರೀನಿವಾಸ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ದೇವರ ನಾಮ, ಸಂಜೆ ನಾದ ಲಹರಿ ತಂಡ ಬಳ್ಳಾರಿ ಇವರಿಂದ ಸಂಗೀತ ಮತ್ತು ನೃತ್ಯ.
ಅ 05 ವಿಜಯದಶಮಿ ವಿಜಯೋತ್ಸವ ಸಾಂಸ್ಕøತಿಕ ಕಾರ್ಯಕ್ರಮ. ಬೆಳಿಗ್ಗೆ ಭವ್ಯ ಶರತ್ ತಂಡ ಬೆಂಗಳೂರು ಇವರಿಂದ ಶಾಸ್ತ್ರೀಯ ಸಂಗೀತ, ಸಂಜೆ ಕಲಾವೃಷ್ಟಿ ತಂಡ ಬೆಂಗಳೂರು ಇವರಿಂದ ಭರತ ನಾಟ್ಯ.
ಅ 06 ರಂದು ಉದ್ಭವ ಗಣಪತಿ ಮತ್ತು ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ,ಶ್ರೀ ಗಣಪತಿ ಅಥರ್ವಶೀರ್ಷ ಹೋಮ,ಪವಮಾನ ಅಭಿಷೇಕ, ಶ್ರೀ ರುದ್ರಹೋಮ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಕು|ಪಂಚಮಿ ಶೃಂಗೇರಿ ಇವರಿಂದ ಶಾಸ್ತ್ರೀಯ ಸಂಗೀತ, ಸಂಜೆ ನಾಟ್ಯಕಲಾ ಸಾಂಸ್ಕøತಿಕ ಕೇಂದ್ರ ಬೆಂಗಳೂರು ಇವರಿಂದ ಭರತನಾಟ್ಯ.
ಅ 07 ರಂದು ಅಭಿಷೇಕ ಸಹಿತ ವಿಶೇಷ ಪೂಜೆ ಶ್ರೀಮನ್ ಮಹಾಚಂಡಿಕಾ ಹೋಮ. ನವಗ್ರಹ ಹೋಮ
ಅ 08 ರಂದು ಪಟ್ಟಾಭಿಷೇಕ ಮಹೋತ್ಸವ ದಿನದ ಅಂಗವಾಗಿ ಅಭಿಷೇಕ ಮತ್ತು ವಿಶೇಷ ಪೂಜೆ, ನವಗ್ರಹ ಹೋಮ ಮತ್ತು ಪಟ್ಟಾಭಿಷೇಕೋತ್ಸವ. ಜೀವ-ಭಾವ ಮತ್ತು ಶ್ರೀ ಮಾತಾ ಪ್ರಶಸ್ತಿ ಪ್ರದಾನ ಸಮಾರಂಭ
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸರ್ವ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಬಳಗದಿಂದ ತಾಳ ಮದ್ದಳೆ, ಮತ್ತು ಮಹಾಗಣಪತಿ ಯಕ್ಷ ಮಂಡಳಿ ಮಂದಾರ್ತಿ ಇವರಿಂದ ಯಕ್ಷಗಾನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು ಎಂದು ದೇವಾಲಯದ ಧರ್ಮಕರ್ತರಾದ ಡಾ|ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.