ತಾಲ್ಲೂಕಿನ ಇಡಕಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2021-22 ನೇ ಸಾಲಿಗೆ ಸುಮಾರು 12 ಲಕ್ಷಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಹೆಚ್.ಆರ್ ಮಹೇಶ್ ಹೇಳಿದರು.
ಹಿರೇಬೈಲಿನ ಸಂಸೃತಿ ಮಂದಿರದಲ್ಲಿ ಗುರುವಾರ ನಡೆದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು ಸಂಘವು ಸುಮಾರು 3000 ಜನ ಸದಸ್ಯರನ್ನು ಹೊಂದಿದ್ದು, 90.00 ಲಕ್ಷ ಷೇರು ಬಂಡವಾಳ ಹೊಂದಿದೆ. ಸುಮಾರು 8 ಕೋಟಿ ಠೇವಣಿ ಹೊಂದಿದ್ದು, ಡಿಸಿಸಿ ಬ್ಯಾಂಕಿನಿಂದ 5 ಕೋಟಿ ಕೆ ಸಿ ಸಿ ಬೆಳೆಸಾಲ ನೀಡಲಾಗಿದೆ. ಸ್ವಂತ ಬಂಡವಾಳದಲ್ಲಿ 7 ಕೋಟಿ ವಿವಿಧ ಸಾಲಗಳನ್ನು ನೀಡಲಾಗಿದೆ. ಸಾಲಗಾರ ಸದಸ್ಯರು ಸಕಾಲದಲ್ಲಿ ಸಾಲ ಮರು ಪಾವತಿಸುವಂತೆ ಸೂಚಿಸಿದರು.
ಸಂಘದ ನಿರ್ದೇಶಕ ಎಂ ಪಿ ಗಿರೀಶ್ ಮಾತನಾಡಿ ಸುಮಾರು 2 ಕೋಟಿ ವೆಚ್ಚದಲ್ಲಿ ವಿವಿದ ಉದ್ದೇಶದ ಗೋದಾಮು ಹಾಗೂ ಮಳಿಗೆ ಸಂಕೀರ್ಣ ಇತ್ಯಾದಿಗಳನ್ನು ನಿರ್ಮಿಸಲು ನಬಾರ್ಡ್ನಿಂದ ಸಾಲ ಪಡೆದಿದ್ದು, ಕಾಮಗಾರಿಯು ಮುಕ್ತಾಯ ಹಂತದಲ್ಲಿದೆ. ಸರ್ವ ಸದಸ್ಯರಲ್ಲಿ ಷೇರು ಡಿವಿಡೆಂಡ್ನ್ನು ಕಟ್ಟಡ ನಿಧಿಗೆ ವರ್ಗಾಹಿಸಲು ಕೋರಿದಾಗ ಸರ್ವಸದಸ್ಯರು ಒಪ್ಪಿಗೆಯನ್ನು ನೀಡಿದರು.
ಸಂಘದ ಉಪಾದ್ಯಕ್ಷರಾದ ಶ್ರೀಮತಿ.ಕೆ ಟಿ ವೃಂದಾವತಿ ಹಾಗೂ ನಿರ್ದೇಶಕರುಗಳಾದ ಬಿ.ಪಿ.ಬೋಜರಾಜ್, ಎಂ.ಸಿ ಸಂತೋಷ್, ವಿ.ಸಿ ಗೋವರ್ದನ್, ಪುರುಷೋತ್ತಮ್ ಎ ಸುವರ್ಣ, ಶ್ರೀಮತಿ ಸುಲೋಚನಾ, ಪ್ರೆಸಿಲ್ಲಾಸಾಲ್ಡನಾ, ನಾಗೇಶ್ ಕೆ, ಹರೀಶ್, ಕೆ.ಎಂ ರವೀಂದ್ರ ಭಟ್ ಹಾಗೂ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರು ಪ್ರಯಾಗ್, ಸಿ ಇ ಒ ಸತೀಶ್ ಇದ್ದರು.