ಉಡುಪಿ ಜಿಲ್ಲೆಯ ಸಾಸ್ಥಾನದಿಂದ ತಿರುಪತಿಗೆ ಸುಮಾರು 980 ಕಿ.ಮೀ ಕಾಲ್ನಡಿಗೆಯ ಮುಖಾಂತರ ತೆರಳಿ ತಿರುಪತಿ ತಿಮ್ಮಪ್ಪ ದರ್ಶನ ಮಾಡಿದ್ದ ಕಳಸ ಬಿಲ್ಲವ ಸಂಘದ ಅಧ್ಯಕ್ಷ ಮಂಜಪ್ಪ ಪೂಜಾರಿ ಯವರಿಗೆ ಜಿಲ್ಲಾ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದಿಂದ ಗೌರವ ಸಲ್ಲಿಸಿದರು.
18 ದಿನ ಕಾಲ 68 ರ ವಯಸ್ಸಿನ ಮಂಜಪ್ಪ ಪೂಜಾರಿ ಇತ್ತೀಚೆಗೆ ಕಾಲ್ನಡಿಗೆಯ ಮುಖಾಂತರ ಯಾತ್ರೆಯನ್ನು ಕೈಗೊಂಡಿದ್ದರು. ಇವರ ಇಳಿ ವಯಸ್ಸಿನಲ್ಲಿ ಈ ಯಾತ್ರೆಯನ್ನು ಕೈಗೊಂಡು ತಿರುಪತಿ ವೆಂಕಟೇಶ್ವರ ದರ್ಶನ ಪಡೆದು ಅರೋಗ್ಯವಾಗಿ ಹಿಂದಿರುಗಿದ ಮಂಜಪ್ಪ ಪೂಜಾರಿ ಯವರನ್ನು ಗುರುತಿಸಿ ಭಾನುವಾರ ನಾರಾಯಣ ಗುರುಗಳ ಸಂದೇಶ ರಥ ಯಾತ್ರೆಯ ಸಮಾರೋಪ ಸಮಾರಂಭ ಬಿಲ್ಲವ ಸಮಾಜ ಸೇವಾ ಸಂಘದ ಸಮುದಾಯ ಭವನದಲ್ಲಿ ಗೌರವ ಸಮರ್ಪಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕೂಟ ಅಧ್ಯಕ್ಷ ಸತೀಶ್, ಒಕ್ಕೂಟದ ಕಾರ್ಯದರ್ಶಿ ವಾಸುಪೂಜಾರಿ ಬಾಳೆಹೊನ್ನೂರು ಬಿಲ್ಲವ ಸಂಘದ ಅಧ್ಯಕ್ಷ ಮೋಹನ್, ಸತ್ಯಜಿತ್ ಸುರತ್ಕ್ಲ್, ಸಾದಶಿವ, ರಾಜಪ್ಪ, ಗುಣಶೇಖರ್, ಎಂ.ಎ. ಶೇಷಗಿರಿ, ನಾರಾಯಣ ಇತರರು ಭಾಗವಿಸಿದ್ದರು.