ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳಗೋಡು ಕಲ್ಲುಕೋರೆ ರಸ್ತೆ ಕೊಚ್ಚಿಹೋಗಿದ್ದು, ಗ್ರಾಮಸ್ಥರು ತೊಂದರೆ ಪಡುತ್ತಿದ್ದಾರೆ.
ಬುಧವಾರ ಸುರಿದ ಮಳೆಗೆ ಮೋರಿಯ ಜೊತೆ ರಸ್ತೆಯೂ ಕೊಚ್ಚಿ ಹೋಗಿದೆ.
ಈ ಬಗ್ಗೆ ಮಾತನಾಡಿದ ಗ್ರಾಮಸ್ಥ ಶ್ರೀನಿವಾಸ್ ಈ ರಸ್ತೆಯ ಬಗ್ಗೆ ಶಾಸಕರಿಗೆ ಈ ಹಿಂದೆಯೆ ಗಮನಕ್ಕೆ ತಂದಿದ್ದೇವೆ. ಆದರೆ ದುರಸ್ಥಿಯ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನಲೆಯಲ್ಲಿ ಈಗ ಮೋರಿಯ ಜೊತೆ ರಸ್ತೆಯೇ ಕೊಚ್ಚಿಹೋಗಿದೆ.
ಇದರಿಂದ ಸಾಕಷ್ಟು ತೊಂದರೆ ಆಗುತ್ತಿದ್ದು ಕೂಡಲೇ ಈ ರಸ್ತೆಯನ್ನು ಸರಿ ಪಡಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.