ಅಸೌಖ್ಯದಿಂದ ಮೃತರಾಗಿದ್ದ ಕೆಳಭಾಗ ಬಿಳುಗೂರಿನ ಸುಂದರಿ ಎಂಬುವವರ ಅಂತ್ಯ ಸಂಸ್ಕಾರವನ್ನು ಶೌರ್ಯ ತಂಡದ ಸದಸ್ಯರು ಮಾಡುವುದರ ಮುಖಾಂತರ ಮಾನವೀಯತೆ ಮೆರೆದಿದ್ದಾರೆ.
ಬಿಳುಗೂರಿನ ವಾಸವಾಗಿದ್ದ ವೃದ್ಧೆ ಸುಂದರಿ ಎಂಬುವವರು ಅಸೌಖ್ಯದಿಂದ ಮೃತರಾಗಿದ್ದರು. ಆದರೆ ಅವರ ಅಂತ್ಯ ಸಂಸ್ಕಾರವನ್ನು ಮಾಡಲು ಕುಟುಂಬಸ್ಥರು ಯಾರೂ ಬಂದಿರದ ಹಿನ್ನಲೆಯಲ್ಲಿ ಸ್ಥಳೀಯರು ಶೌರ್ಯ ತಂಡದ ಸದಸ್ಯರಿಗೆ ಮಾಹಿತಿ ನೀಡಿದ್ದರು.
ಕೂಡಲೆ ಅಜಿತ್ ಕುಲಾಳ್, ಸುದರ್ಶನ್, ರವಿ ಶೆಟ್ಟಿ, ಸದಾನಂದ, ಶರೀಪ್ ಸ್ಥಳಕ್ಕೆ ತೆರಳಿ ವೃದ್ದೇಯ ಮೃತದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರವನ್ನು ನೆರವೇರಿಸಿದಿದರು.
ಶೌರ್ಯ ತಂಡದ ಈ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.