- ಕಳಸ ತಾಲ್ಲೂಕಿನ ತೋಟದೂರು ಗ್ರಾಮದ ಆಳಗೋಡು ಬಳಿ ಆಟೊ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಬಾಳೆಹೊಳೆಯಿಂದ ತನೂಡಿ ಗ್ರಾಮಕ್ಕೆ ವಿಠಲ (25) ತಮ್ಮ ಆಟೋದಲ್ಲಿ ಜನರನ್ನು ಕರೆದುಕೊಂಡು ಬಾಡಿಗೆಗೆ ಹೋಗಿದ್ದರು.ಜನರನ್ನು ಬಿಟ್ಟು ವಾಪಸ್ ಮರಳುವಾಗ ಆಳಗೋಡು ಬಳಿ 3.30ಕ್ಕೆ ಆಟೋ ಅಪಘಾತ ಸಂಭವಿಸಿದೆ.
ನಿಯಂತ್ರಣ ತಪ್ಪಿದ ಆಟೋ ಪಲ್ಟಿ ಆದಾಗ ಆಟೊ ಕೆಳಗೆ ಸಿಲುಕಿ ವಿಠಲ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪಡೀಲು ವಾಸಿ ಆಗಿದ್ದ ವಿಠಲ ಅವಿವಾಹಿತ ಆಗಿದ್ದರು. ಅವರಿಗೆ ತಾಯಿ,ಅಣ್ಣ, ಅಕ್ಕಂದಿರು ಇದ್ದಾರೆ.