ಕಳಸ ತಾಲ್ಲೂಕಿನ ಯಳಂದೂರಿನಲ್ಲಿ ಹಳ್ಳಕ್ಕೆ ಬಿದ್ದು ಮೃತ ಪಟ್ಟಿದ್ದ ರಮೇಶ್(35) ಎಂಬುವವರ ಅಂತ್ಯ ಸಂಸ್ಕಾರವನ್ನು ಸೋಮವಾರ ಮಾಡಲಾಯಿತು.
ಆಗಸ್ಟ್ 15ರಂದು ಮನೆಯಿಂದ ಹೊರ ಹೋಗಿದ್ದ ರಮೇಶ್ ಮರಳಿ ಮನೆಗೆ ಬಂದಿರಲಿಲ್ಲ.ಈ ಬಗ್ಗೆ ಊರಿನ ಗ್ರಾಮಸ್ಥರು ಸಾಕಷ್ಟು ಹುಡುಕಾಟವನ್ನು ನಡೆಸಿದ್ದರು.
ಸೋಮವಾರ ಬೆಳಿಗ್ಗೆ 9ರ ಸುಮಾರಿಗೆ ಯಳಂದೂರಿನ ಹಳ್ಳದಲ್ಲಿ ರಮೇಶ್ ಅವರ ಮೃತದೇಹ ಕೊಳೆತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಮೃತದೇಹವನ್ನು ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಅಜಿತ್, ಸುದರ್ಶನ್, ರವಿ ಶೆಟ್ಟಿ, ದಿನೇಶ್ ಮೇಲಕ್ಕೆತ್ತಿದರು.ಸ್ಥಳಕ್ಕೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಆಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.ತಹಶೀಲ್ದಾರ್ ನಂದಕುಮಾರ್,ಇಡಕಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್ ಭಂಡಾರಿ,ಕಳಸ ಠಾಣಾಧಿಕಾರಿ ಹರ್ಷವರ್ಧನ್ ಆಗಮಿಸಿದ್ದರು.
ಸ್ಥಳದಲ್ಲಿ ಊರಿನ ಸಾಕಷ್ಟು ಗ್ರಾಮಸ್ಥರು ಹಾಜರಿದ್ದು,ಮೃತರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡರು.