ಆಗಸ್ಟ್ 15ರ ರಾತ್ರಿ ಕಾಣೆಯಾಗಿದ್ದ ಯಳಂದೂರು ರಮೇಶ್(35) ಎಂಬುವವರ ಮೃತದೇಹ ಅದೇ ಊರಿನ ನದಿಯಲ್ಲಿ ಸೋಮವಾರ ಪತ್ತೆಯಾಗಿದೆ.
ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಳಂದೂರಿನ ರಮೇಶ್ ಎಂಬುವವರು ಆಗಸ್ಟ್ 15ರ ರಾತ್ರಿ ಮನೆಯಿಂದ ಹೊರ ಹೋದವರು ಮರಳಿ ಬಂದಿರಲಿಲ್ಲ.ಈ ಬಗ್ಗೆ ಸ್ಥಳಿಯರು ಸಾಕಷ್ಟು ಹುಡುಕಾಟ ನಡೆಸಿದ್ದರು.ಕಳಸ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರು.ಆದರೆ ಕಾಣೆಯಾಗಿದ್ದವರ ಸುಳಿವು ಸಿಕ್ಕಿರಲಿಲ್ಲ.
ಸೋಮವಾರ ಬೆಳಿಗ್ಗೆ 9ರ ಸುಮಾರಿಗೆ ಯಳಂದೂರಿನ ಸುಭದ್ರ ನದಿಯಲ್ಲಿ ರಮೇಶ್ ಅವರ ಮೃತದೇಹ ಕೊಳೆತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.
ಘಟನೆಗೆ ಕಾರಣಗಳು ತಿಳಿದು ಬಂದಿಲ್ಲ.
Related Stories
September 6, 2024