ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಮಮ್ತಾಜ್ ಬೇಗಂ ಶನಿವಾರ ಸೇವಾದೀಕ್ಷೆ ಸ್ವೀಕರಿಸಿದರು.
ಸೇವಾದೀಕ್ಷ ಕಾರ್ಯಕ್ರಮವನ್ನು ಹೊರನಾಡಿನ ಶ್ರೀಮತಿ ರಾಜಲಕ್ಷ್ಮೀ ಬೀ ಜೋಷಿ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ವಹಿಸಿದ್ದರು.
ಕಸಾಪ ಮಹಿಳಾ ಜಿಲ್ಲಾಧ್ಯಕ್ಷೆ ಶ್ರೀಮತಿ ಸವಿತಾ ಸತ್ಯನಾರಾಯಣ ಕಳಸ ಅಧ್ಯಕ್ಷೆ ಮಮ್ತಾಜ್ ಬೇಗಂ ಅವರಿಗೆ ಪರಿಷತ್ತಿನ ದ್ವಜ ಹಸ್ತಾಂತರಿಸಿದರು.ಕಳಸ ಕಸಾಪ ತಾಲ್ಲೂಕು ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಮಹಿಳಾ ಘಟಕದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುಜಯ ಸದಾನಂದ, ಜಿಲ್ಲಾ ಗೌರಾವಧ್ಯಕ್ಷೆ ಶ್ರೀಮತಿ ನಿರ್ಮಲಾ ಮಂಚೇಗೌಡ,ಜಿಲ್ಲಾ ಪ್ರಧಾನ ಸಂಚಾಲಕರು ಶ್ರೀಮತಿ ವಿಶಾಲಾಕ್ಷಮ್ಮ, ಕಳಸ ಘಟಕದ ಗೌರವಾಧ್ಯಕ್ಷರು ಮನೋರಾಧಿನಿ ಧರಣೇಂದ್ರ,ಮಹಿಳಾ ಮಂಡಳಿ ಮಾಜಿ ಅಧ್ಯಕ್ಷರು ಶ್ರೀಮತಿ ಚಂಪಾ ಎಂ.ರಾವ್, ಕೆಪಿಎಸ್ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಕೆ.ಹೆಚ್.ರಂಗನಾಥ್, ಪದವಿ ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ, ಕೆಪಿಎಸ್ ಉಪಪ್ರಾಂಶುಪಾಲ ಶಿವಕುಮಾರ್, ಕಸಬಾ ಹೋಬಳಿ ಅಧ್ಯಕ್ಷ ಶೇಖರ ಶೆಟ್ಟಿ ಇದ್ದರು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶ್ರೀಮತಿ ಸುಚಿತ್ರಾ ಶೆಟ್ಟಿ, ಸ್ವಾಗತ ಶ್ರೀಮತಿ ಸುಮನಾ ಜಯರಾಜ್, ನಿರೂಪಣೆಯನ್ನು ಶ್ರೀಮತಿ ಜಯಶ್ರೀ ಧರಣೇಂದ್ರ ಮಾಡಿದರು.