ಕಳಸ ತಾಲ್ಲೂಕಿನ ಹೊರನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವನಳ್ಳ ಸಮೀಪದ ಕಳ್ಳರಪಾಳು ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ.
ಇದರಿಂದ ಪರಿಶಿಷ್ಠ ವರ್ಗಕ್ಕೆ ಸೇರಿದ ಉದಯ-ವನೀತ ಗಿರಿಜನ ಕುಟುಂಬ ಮನೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಕವನಳ್ಳದಿಂದ ಕಳ್ಳರಪಾಲು ಗೊರಸಿನತೋಟ ಪ್ರದೇಶಕ್ಕೆ ತೆರಳುವ ರಸ್ತೆ ಪಕ್ಕ ಬುಧವಾರ ಸಂಜೆ ಸುರಿದ ಭಾರಿ ಮಳೆಗೆ ಭೂಕುಸಿತ ಉಂಟಾಗಿದೆ.ನಂತರ ಸತತ ಧರೆ ಕುಸಿದು ಮನೆಯ ಮೇಲೆ ಮಣ್ಣು ತುಂಬಿಕೊಳ್ಳುತ್ತಿದೆ. ಕೃಷಿ ಜಮೀನು ಕೂಡ ಹಾನಿಯಾಗಿದ್ದು,ಅಡಿಕೆ,ಕಾಫಿ ಗಿಡಗಳು ಮಣ್ಣು ಪಾಲಾಗಿದೆ.