ಕಳಸದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಳಸ ಶಾಖೆಯನ್ನು ಕಳಸ ಮುಖ್ಯ ರಸ್ತೆಯಲ್ಲಿರುವ ಲಕ್ಷ್ಮೀ ಕಾಂಪ್ಲೆಕ್ಸ್ ಗೆ ಸೋಮವಾರ ಸ್ಥಳಾಂತರಿಸಲಾಗಿದೆ.
ನೂತನ ಕಟ್ಟಡಕ್ಕೆ ಸ್ಥಳಾಂತರದ ಉದ್ಘಾಟನೆಯನ್ನು ರಾಜ್ಯ ಬಸ್ ಮಾಲಿಕರ ಒಕ್ಕೂಟದ ಉಪಾಧ್ಯಕ್ಷ ಕೆ.ಕೆ.ಬಾಲಕೃಷ್ಣ ಭಟ್ ನೆರವೇರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಶ್ರೀ ವೇದವ್ಯಾಸ್ ಭಟ್ ವಹಿಸಿದ್ದರು.
ಲಕ್ಷ್ಮೀ ಕಾಂಪ್ಲೆಕ್ಸ್ ಮಾಲಕ ರಾಜ್ ಕುಮಾರ್ ಶೇಟ್,ಸಂಸೆ ಶಾಖೆಯ ಮುಖ್ಯಸ್ಥ ರಾಮಚಂದ್ರ ನೈರಿ,ರೀಜನಲ್ ಕಚೇರಿ ಚಿಕ್ಕಮಗಳೂರು ವ್ಯವಸ್ಥಾಪಕ ಶ್ರೀನಿವಾಸ್ ನಾಯಕ್,ರಾಘವೇಂದ್ರ ಭಟ್, ಮಮ್ತಾಜ್ ಬೇಗಂ, ಕಳಸ ಶಾಖೆ ವ್ಯವಸ್ಥಾಪಕ ಅಭಿಷೇಕ್ ಇದ್ದರು.