ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕರೆ ನೀಡಿದ್ದ ಕಳಸ ತಾಲ್ಲೂಕು ಬಂದ್ ಗೆ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ.
ಕಳಸ ಮುಖ್ಯ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಳಸ ಮುಖ್ಯ ರಸ್ತೆಯನ್ನು ಕೆಲ ಕಾಲ ರಸ್ತೆ ತಡೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೋ ರಕ್ಷಕ ಪ್ರಮುಖ್ ಅಜಿತ್ ಕುಳಾಲ್, ಹಿಂದು ಮುಖಂಡ ಬಿ.ಕೆ.ಮಹೇಶ್, ಕೊಪ್ಪ ತಾಲ್ಲೂಕು ಸಂಚಾಲಕ ರಾಕೇಶ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು.
ತಾಲ್ಲೂಕು ಗೋರಕ್ಷಕ ಪ್ರಮುಖ್ ವಿಜಯ್,ತಾಲ್ಲೂಕು ಸಂಚಾಲಕ ಸಂತೋಷ್,ತಾಲ್ಲೂಕು ಸಹ ಸಂಯೋಜಕ ಚೇತನ್,ಸುರಕ್ಷಾ ಪ್ರಮುಖ್ ಪ್ರದೀಪ್,ಮುಖಂಡರಾದ ಸುಜಯಸದಾನಂದ,ಗಿರೀಶ್ ಹೆಮ್ಮಕ್ಕಿ ಇತರರು ಇದ್ದರು.
ಮುಂಜಾಗೃತಾ ಕ್ರಮವಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.